Select Your Language

Notifications

webdunia
webdunia
webdunia
webdunia

ಕಾಣೆಯಾಗಿದ್ದವರು ಸಿಕ್ಕಿದ್ದು ಹೇಗೆ? ಬಿಗ್ ಶಾಕಿಂಗ್

ಕಾಣೆಯಾಗಿದ್ದವರು ಸಿಕ್ಕಿದ್ದು ಹೇಗೆ? ಬಿಗ್ ಶಾಕಿಂಗ್
ಬೆಳಗಾವಿ , ಗುರುವಾರ, 12 ಸೆಪ್ಟಂಬರ್ 2019 (18:38 IST)
ಕಾಣೆಯಾಗಿದ್ದವರು ಸಿಗಬಾರದ ಸ್ಥಿತಿಯಲ್ಲಿ ಮನೆಮಂದಿಗೆ ಸಿಕ್ಕಿದ್ದು, ಇದರಿಂದ ಕುಟುಂಬದವರು ತೀವ್ರ ದುಃಖದಲ್ಲಿದ್ದಾರೆ.

ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ರಾಮದುರ್ಗ ತಾಲ್ಲೂಕಿನ ಕಿಲಬನೂರ ಗ್ರಾಮದ ಹಣಮಂತ ಹಳ್ಳಿ ಎಂಬ ವೃದ್ಧರು  ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

82 ವರ್ಷದ ಹಣಮಂತ ಹಳ್ಳಿ ಎನ್ನುವವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ದೊಡ್ಡಮಂಗಡಿ ಗ್ರಾಮದ ಮಲಪ್ರಭಾ ನದಿಯಲ್ಲಿ ಶವವಾಗಿ  ಪತ್ತೆಯಾಗಿದ್ದಾರೆ. ಸಾವಿನ ಬಗ್ಗೆ ಸರಿಯಾದ ಮಾಹಿತಿ ಇನ್ನು ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ರಾಮದುರ್ಗ ತಹಶೀಲ್ದಾರ ಹಾಗೂ ಪಿಎಸ್ಐ ಭೇಟಿ ನೀಡಿ  ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದಿನ ತೋಟದ ಮನೆಯಿಂದ ಊರಿನಲ್ಲಿರುವ ಮನೆಗೆ ಬಂದು ಹೋಗುತ್ತಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ಮನೆಯಿಂದ ಕಾಣೆಯಾಗಿದ್ದರು. ಎಲ್ಲ ಕಡೆ ಹುಡುಕಾಡಿದರೂ ಯಾವುದೇ ಸುಳಿವು ದೊರಕಿರಲಿಲ್ಲ ಈಗ ದೊಡ್ಡಮಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಅಂತ ವೃದ್ಧನ ಮನೆ ಮಂದಿ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮಂದಿಗೆ ವಿಷ ಹಾಕಿ ರೇಪ್ ಮಾಡಿದ್ದ ಲವರ್ ಜೊತೆ ಓಡಿಹೋದ ಮಗಳು