Select Your Language

Notifications

webdunia
webdunia
webdunia
webdunia

ತಿಂಗಳ ಬಳಿಕ ಪ್ರವಾಹದಲ್ಲಿ ಕೊಚ್ಚಿಹೋದ ಬಾಲಕನ ಶವ ಪತ್ತೆ: ಶವ ಹೇಗಾಗಿತ್ತು?

ತಿಂಗಳ ಬಳಿಕ ಪ್ರವಾಹದಲ್ಲಿ ಕೊಚ್ಚಿಹೋದ ಬಾಲಕನ ಶವ ಪತ್ತೆ: ಶವ ಹೇಗಾಗಿತ್ತು?
ಚಿಕ್ಕೋಡಿ , ಗುರುವಾರ, 5 ಸೆಪ್ಟಂಬರ್ 2019 (19:04 IST)
ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕನ ಶವ ಕೊನೆಗೂ ಪತ್ತೆಯಾಗಿದೆ.

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ  ಬಾಲಕನ ಶವ  ಪತ್ತೆಯಾಗಿದೆ.

ಬಸವರಾಜ ಮಾನಿಕ ಕಾಂಬಳೆ (13)  ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಆಗಸ್ಟ್ 7 ರಂದು ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದನು. ಈಗ ಶವವಾಗಿ ಪತ್ತೆಯಾಗಿದ್ದಾನೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿಇಂಗಲಗಾವ ಗ್ರಾಮದ ಕಬ್ಬಿಣ ತೋಟದಲ್ಲಿ ಶವ ಪತ್ತೆಯಾಗಿದೆ.  

ಪ್ರವಾಹ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ಆಕಸ್ಮಿಕ  ಸೆಳೆತಕ್ಕೆ ಸಿಲುಕಿದ್ದನು ಬಸವರಾಜ ಕಾಂಬಳೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಾಲಕನಾಗಿದ್ದಾನೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿ, ದೊಡ್ಡಮ್ಮಳ ಮೇಲೆ ಆ ಕೆಲಸ ಮಾಡಿದ ಬುಲೆಟ್ ನಾಗ