Select Your Language

Notifications

webdunia
webdunia
webdunia
webdunia

ನಂಬರ್‌ ಪ್ಲೇಟೇ ಇಲ್ಲದ ಬೈಕ್ ಸವಾರ ಸಿಕ್ಕಿದ್ದು ಹೇಗೆ?

crime news

geetha

bangalore , ಶನಿವಾರ, 17 ಫೆಬ್ರವರಿ 2024 (15:30 IST)
ಬೆಂಗಳೂರು : ಫೆ. 12 ರಂದು ಗವಿ ಪುರ ಎಕ್ಸ್‌ಟೆನ್ಷನ್‌ ರಸ್ತೆಯಲ್ಲಿ ಅತಿವೇಗ ಹಾಗೂ  ಅಜಾರೂಕತೆಯಿಂದ ಬೈಕ್‌ ಓಡಿಸಿಕೊಂಡು ಬಂದಿದ್ದ ವೇಣು ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ರಮೇಶ್‌ (48) ಅವರ ಆಟೋಗೆ ಗುದ್ದಿದ್ದ. ಆಟೋಚಾಲಕ ರಮೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವೇಣು ಸ್ಥಳದಿಂದ ಪರಾರಿಯಾಗಿದ್ದ. ಟೋಚಾಲಕನ ಸಾವಿಗೆ ಕಾರಣವಾಗಿದ್ದ ಯುವಕನನ್ನು ಬಂಧಿಸುವಲ್ಲಿ ಬಸವನಗುಡಿ ಸಂಚಾರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬೈಕ್‌ ಸವಾರ ವೇಣು ನಂಬರ ಪ್ಲೇಟ್‌ ಇಲ್ಲದ ವಾಹನ ಬಳಸಿದ್ದ ಕಾರಣ ಪೊಲೀಸರ ತನಿಖೆ ಕಷ್ಟವಾಗಿತ್ತು. 

ಸುಮಾರು 70 ಕ್ಕೂ ಅಧಿಕ ಸಿಸಿಟಿವಿ ಕೆಮೆರಾಗಳನ್ನು ಪರಿಶೀಲನೆ ಮಾಡಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೇಟಿಎಂ ಪೇಮೆಂಟ್ ಬಾಂಕ್ ಗಡುವು ವಿಸ್ತರಣೆ ಮಾಡಿದ ಆರ್ ಬಿಐ: ಇಲ್ಲಿದೆ ಮಾಹಿತಿ