Select Your Language

Notifications

webdunia
webdunia
webdunia
webdunia

ತಾಯಿ-ಮಕ್ಕಳಿಬ್ಬರಿಗೆ ದುರಂತ ಸಾವು ಬಂದಿದ್ದು ಹೇಗೆ?

ತಾಯಿ-ಮಕ್ಕಳಿಬ್ಬರಿಗೆ ದುರಂತ ಸಾವು ಬಂದಿದ್ದು ಹೇಗೆ?
ಚಿಕ್ಕಬಳ್ಳಾಪುರ , ಸೋಮವಾರ, 10 ಜೂನ್ 2019 (19:44 IST)
ತಾಯಿ ಹಾಗೂ ಆಕೆಯ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಟ್ಟೆತೊಳೆಯಲು ಹೋಗಿದ್ದ ಗೃಹಿಣಿಯೊಬ್ಬಳು ತನ್ನ ಮಕ್ಕಳೊಂದಿಗೆ ಸಾವನ್ನಪ್ಪಿದ್ದಾಳೆ. ಮೊದಲಿಗೆ ಕಾಲು ಜಾರಿ ಮಗನೊಬ್ಬ ಬಾವಿಗೆ ಬೀಳುತ್ತಿದ್ದ. ಆತನನ್ನು ರಕ್ಷಿಸಲು ಹೋಗಿ ಆಯತಪ್ಪಿ ಮತ್ತೊಬ್ಬ ಮಗನೊಂದಿಗೆ ಬಾವಿಯಲ್ಲಿ ಬಿದ್ದು ತಾಯಿಯೂ ಮೃತಪಟ್ಟಿದ್ದಾಳೆ.

ಚಿಕ್ಕಬಳ್ಳಾಪುರ ಜಿಲ್ಲೆಯ ತಿಪ್ಪೆನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವಿಜಯಲಕ್ಷ್ಮೀ (30), ಆಕೆಯ ಪುತ್ರ ಅಜಯ್ (10) ಹಾಗೂ ಪುತ್ರಿ ಧನಲಕ್ಷ್ಮೀ (8) ಸಾವನ್ನಪ್ಪಿದ್ದಾರೆ.

ತಿಪ್ಪೆನಹಳ್ಳಿಯ ನಾಗರಾಜ್ ಎಂಬುವರೊಂದಿಗೆ 11 ವರ್ಷಗಳ ಹಿಂದೆ ವಿಜಯಲಕ್ಷ್ಮೀ ಮದುವೆಯಾಗಿದ್ದರು. ಬಟ್ಟೆ ಒಗೆಯಲು ತನ್ನಿಬ್ಬರು ಮಕ್ಕಳೊಂದಿಗೆ ತೋಟದ ಬಾವಿಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ತೋಟದ ಬಾವಿಗೆ ಹೋದ ಮಡದಿ, ಮಕ್ಕಳು ಎಷ್ಟು ಹೊತ್ತು ಆದರೂ ಬಾರದ ಕಾರಣ ಬಾವಿ ಹತ್ತಿರ ಹೋಗಿ ಪತಿ ನಾಗರಾಜ್ ನೋಡಿದಾಗ ಮೂವರು ಸಾವನ್ನಪ್ಪಿರುವುದು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಅಪರಾಧಿಗಳೆಂದು ಘೋಷಣೆ