Publish Date: Tue, 30 Apr 2019 (18:46 IST)
Updated Date: Tue, 30 Apr 2019 (18:48 IST)
ಸಿಐಡಿ ಕಚೇರಿಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದು, ಬಂಧಿತ ಪತ್ರಕರ್ತ ಹೇಮಂತ್ ಕುಮಾರ್ ಹಾಗೂ ಸಿಐಡಿ ಡಿಜಿಪಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹೇಮಂತ್ ಕುಮಾರ ಯಾವುದೇ ನಕಲಿ ಪತ್ರವನ್ನು ಸೃಷ್ಟಿಸಿಲ್ಲ. ಬೇರೆ ಯಾರೋ ಕಳುಹಿಸಿದ್ದ ಪತ್ರವನ್ನು ಫಾರ್ವರ್ಡ್ ಮಾಡಿದ್ದಾರೆ. ಎಂ.ಬಿ.ಪಾಟೀಲ್ ಗೃಹ ಸಚಿವರಾದ ಮೇಲೆ ಬಿಜೆಪಿ ವಿರುದ್ಧ ರಾಜಕೀಯ ದ್ವೇಷ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಗಳನ್ನು ದಾಖಲಿಸಲಾಗುತ್ತಿದೆ.
ವಾಸ್ತವದಲ್ಲಿ ಲಿಂಗಾಯಿತ ವೀರಶೈವ ಧರ್ಮವನ್ನು ಒಡೆಯಲು ಪ್ರಯತ್ನಿಸಿ ವಿಫಲರಾದವರು ಎಂ.ಬಿ.ಪಾಟೀಲರು. ತಮ್ಮ ತಪ್ಪು ಮುಚ್ಚಿಕೊಳ್ಳಲು ಈಗ ಬಿಜೆಪಿ ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ದೂರಿದ್ದಾರೆ.