Publish Date: Sun, 28 Apr 2019 (15:35 IST)
Updated Date: Sun, 28 Apr 2019 (15:37 IST)
ರಾಜ್ಯದ ಸಚಿವ ಎಂ.ಬಿ.ಪಾಟೀಲ್, ಡಿ.ಕೆ. ಶಿವಕುಮಾರ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಾಕೀತು ಮಾಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ನಿಲುವು ತಿಳಿಸಿದ ಬಳಿಕ ಚುನಾವಣೆಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.
ಸಚಿವರಾದ ಎಂ.ಬಿ.ಪಾಟೀಲ್, ಡಿ.ಕೆ. ಶಿವಕುಮಾರ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ರೀತಿ ತಾಕೀತು ಮಾಡಿದ್ದಾರೆ.
ಕೇವಲ ಲಿಂಗಾಯತ ಧರ್ಮದ ಪ್ರತ್ಯೇಕ ಕುರಿತು ದ್ವಂದ್ವ ನಿಲುವು ಬೇಡ ಎಂದಿರುವ ಶೆಟ್ಟರ್, ಕಾಂಗ್ರೆಸ್ ನ ಅವರಲ್ಲಿಯೇ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಬಗ್ಗೆ ಕೂಡಲೇ ಸ್ಪಷ್ಟತೆ ನೀಡಲಿ ಎಂದು ಒತ್ತಾಯ ಮಾಡಿದ್ರು.
ಲಿಂಗಾಯತ ಧರ್ಮದ ಕುರಿತು ನಿರ್ಧಾರ ಪ್ರಕಟ ಮಾಡಿದ ಬಳಿಕ ಕುಂದಗೋಳ ಉಪಚುನಾವಣೆ ಎದುರಿಸಲಿ ಎಂದು ಕೈ ನಾಯಕರಿಗೆ ಹೇಳಿದ್ದಾರೆ.