Select Your Language

Notifications

webdunia
webdunia
webdunia
webdunia

ರಾಜ್ಯದ ರೈತರಿಗೆ ಹೋಟೆಲ್ ಮಾಲೀಕರ ಬೆಂಬಲ: ನಂದಿನಿ ಹಾಲು, ಉತ್ಪನ್ನಗಳನ್ನೇ ಬಳಸಲು ನಿರ್ಧಾರ

ರಾಜ್ಯದ ರೈತರಿಗೆ ಹೋಟೆಲ್ ಮಾಲೀಕರ ಬೆಂಬಲ: ನಂದಿನಿ ಹಾಲು, ಉತ್ಪನ್ನಗಳನ್ನೇ ಬಳಸಲು ನಿರ್ಧಾರ
bangalore , ಭಾನುವಾರ, 9 ಏಪ್ರಿಲ್ 2023 (17:42 IST)
ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳು ಅಮುಲ್‌, ನಂದಿನಿ ವಿಚಾರದಲ್ಲಿ ಕಿತ್ತಾಟ ಶುರುವಿಟ್ಟುಕೊಂಡಿವೆ. ಈ ನಡುವಲ್ಲೇ ಬೆಂಗಳೂರಿನ ಹೋಟೆಲ್‌ ಮಾಲೀಕರ ಸಂಘ ಮಹತ್ವದ ಯೋಜನೆಯನ್ನು ಜಾರಿಗೆ ತರುವ ಮೂಲಕ ರಾಜ್ಯದ ರೈತರ ನೆರವಿಗೆ ನಿಂತಿದೆ.
 
ನಮ್ಮ ರೈತರು ಉತ್ಪಾದಿಸುವ ನಂದಿನಿ ಹಾಲಿನ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯಿದೆ. ನಂದಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಎಲ್ಲರೂ ಬೆಂಬಲಿಸಬೇಕು. ನಮ್ಮ ನಗರದಲ್ಲಿ ಶುಚಿಯಾದ ಮತ್ತು ರುಚಿಕರವಾದ ಕಾಫಿ, ತಿಂಡಿಗಳನ್ನು ಗ್ರಾಹರಿಕೆ ನೀಡುತ್ತಿದ್ದೇನೆ. ನಾವು ನಂದಿನಿ ಹಾಲಿನ ಉತ್ಪನ್ನಗಳನ್ನೇ ಗ್ರಾಹಕರಿಗೆ ನೀಡಲಿದ್ದೇನೆ ಎನ್ನುವ ಮೂಲಕ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ರೈತರ ನೆರವಿಗೆ ನಿಂತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವರುಣಾ, ಶಿಕಾರಿಪುರದಲ್ಲಿ ‘ಕೈ’-ಕಮಲ ಫಿಕ್ಸಿಂಗ್​?