Select Your Language

Notifications

webdunia
webdunia
webdunia
webdunia

ಬೆಂಗಳೂರು ಜನರಿಗೆ ಬಮೂಲ್ ಶಾಕ್..!

ಬೆಂಗಳೂರು  ಜನರಿಗೆ ಬಮೂಲ್ ಶಾಕ್..!
bangalore , ಶುಕ್ರವಾರ, 3 ಮಾರ್ಚ್ 2023 (13:59 IST)
ಇಂದಿನಿಂದ ನಿಮಗೆ ಸರಿಯಾದ ಸಮಯಕ್ಕೆ ಹಾಲು ಸಿಗೋದು ಡೌಟ್. ಸಿಲಿಕಾನ್ ಸಿಟಿಯ ಹಲವು ಭಾಗಗಳಲ್ಲಿ ಹಾಲಿನ ವ್ಯತ್ಯಯ ಕಾಡಲಿದೆ.ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ ನಲ್ಲಿ ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ.ಕಳೆದೆರೆಡು ದಿನಗಳಿಂದ‌ ನಗರದ ಅನೇಕ ಕಡೆ ಸರಿಯಾದ ಸಮಯಕ್ಕೆ  ಹಾಲು ಸಿಗದೆ ಇರುವುದಕ್ಕೆ  ಬಮುಲ್ ನ ಇಆರ್ಪಿ ಸರ್ವರ್ ಡೌನ್ ಎಫೆಕ್ಟ್ ಆಗಿದೆ.ಇದೇ ಸಮಸ್ಯೆ ಮುಂದಿನ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ.ಇಆರ್ಪಿ ಸಮಸ್ಯೆಯಿಂದ ಲಾರಿಗಳಿಗೆ ಸಿಸ್ಟಮ್ ನ ಡೇಟಾ ಪ್ರಕಾರ ಲೋಡ್ ಮಾಡಲು ತೊಂದರೆಯಾಗಿದೆ.ಸರಿಯಾದ ಸಮಯಕ್ಕೆ ಲೋಡ್ ಆಗದ ಕಾರಣ ಸಪ್ಲೈ ನಲ್ಲಿ ವ್ಯತ್ಯಯವಾಗಲಿದೆ.
 
ಸಿಸ್ಟಂ ಸರಿ ಮಾಡೋದಕ್ಕೆ ಸದ್ಯ ಈಗಾಗಲೇ ಹೈದರಾಬಾದ್ ತಜ್ಞರ ಮೊರೆ ಬಮುಲ್ ಅಧಿಕಾರಿಗಳು ಹೋಗಿದ್ದಾರೆ.ಇಂದು ಹೈದ್ರಾಬಾದ್ ನಿಂದ ತಂಡ ಆಗಮಿಸುವ ಸಾಧ್ಯತೆ ಇದೆ. ನಾಳೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ  ಬಮುಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮಾರುಕಟ್ಟೆ ಮೇಲೆ ರಷ್ಯಾಗೆ ಒಲವೇಕೆ?