Publish Date: Thu, 02 Mar 2023 (18:55 IST)
Updated Date: Thu, 02 Mar 2023 (18:58 IST)
ಜನ ಕರೆತರಲು 500 ರೂ ಕೊಟ್ಟು ಕರೆಸಿ ಅಂತ ಸಿದ್ದರಾಮಯ್ಯ ಹೇಳಿಕೆಗೆ ಕಂದಾಯ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಪಾರ್ಟಿ ಇಡೀ ದೇಶದಲ್ಲಿ ತಲೆತಗ್ಗಿಸೋ ಹೇಳಿಕೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ.75 ವರ್ಷಗಳ ಕಾಲ 65 ವರ್ಷ ಸರ್ಕಾರ ಹೇಗೆ ನಡೆಸಿದ್ರು ಅನ್ನೋದು ಬಟಾ ಬಯಲಾಗಿದೆ ಕಾಂಗ್ರೆಸ್ ನವರು ಹಣ, ಹೆಂಡ ಜನರಿಗೆ ಹಂಚಿದ್ದೇವೆ ಅನ್ನೋದು ಬಹಿರಂಗವಾಗಿದೆ.ಚುನಾವಣೆ ಸಂದರ್ಭದಲ್ಲಿ ಇರೋ ಸಮಯದಲ್ಲಿ ಸಿದ್ದರಾಮಯ್ಯ ಅವರ ಈ ಹೇಳಿಕೆ ಮತದಾರರ ಅವಮಾನ ಮಾಡಿದಂತಿದೆ.ಇವರು ಕಾರ್ಯಕ್ರಮಕ್ಕೆ ಬರೋಕೆ 500 ಅಂದ್ರೆ, ಮತ ಪಡೆಯಲು ಎಷ್ಟು ಕೊಡ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು .