Publish Date: Sat, 29 May 2021 (12:10 IST)
Updated Date: Sat, 29 May 2021 (12:12 IST)
ಬೆಂಗಳೂರು : ಕೊರೊನಾ ಕಂಟ್ರೋಲ್ ಆಗೋವರೆಗೂ ಲಾಕ್ ಫಿಕ್ಸ್ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಲಾಕ್ ಡೌನ್ ವಿಸ್ತರಣೆ ಸುಳಿವು ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಾವು ಹೆಚ್ಚುತ್ತಲೇ ಇದೆ. ಅನ್ ಲಾಕ್ ಮಾಡದಂತೆ ತಜ್ಞರು ಸಲಹೆ ನೀಡಿದ್ದಾರೆ. ತಜ್ಞರ ಸಲಹೆ ಮೇರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪಾಸಿಟಿವ್ ರೇಟ್ ಕಡಿಮೆ ಆಗೋವರೆಗೂ ಲಾಕ್ ಮಾಡಲಾಗುವುದು, ಪಾಸಿಟಿವ್ ರೇಟ್ ಶೇ.10ರೊಳಗೆ ಇಳಿಯಬೇಕು. ಹಳ್ಳಿಗಳಲ್ಲಿ 16% ಪಾಸಿಟಿವ್ ರೇಟ್ ಇದೆ. ಶೇ5ಕ್ಕೆ ಇಳಿಯೋವರೆಗೂ ಟಫ್ ರೂಲ್ಸ್ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.