Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಎಸ್‌.ಎಂ ಕೃಷ್ಣರನ್ನು ಭೇಟಿಯಾದ ಎಚ್‌ಡಿಕೆ, ಆರ್‌.ಅಶೋಕ್, ನಿಖಿಲ್

JDS Leader H D Kumaraswamy

Sampriya

ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2024 (15:18 IST)
Photo Courtesy X
ಬೆಂಗಳೂರು:  ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಎಸ್‌.ಎಂ ಕೃಷ್ಣ ಅವರನ್ನು  ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದರು.

ಲೋಕಸಭಾ ಮಂಡ್ಯ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಅವರ ಇದ್ದರು.  

ಈ ವೇಳೆ ಎಚ್‌ಡಿಕೆ ಹಾಗೂ ನಿಖಿಲ್ ಅವರು ಎಸ್‌ ಎಂ ಕೃಷ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಎಂ ಎಂ ಕೃಷ್ಣ ಅವರು ಮಂಡ್ಯದಲ್ಲಿ ಒಂದು ಬಾರಿ ಸ್ಪರ್ಧಿಸಿದ್ದರು. ಅವರ ನನ್ನ ತಂದೆಯ ಸಮಕಾಲೀನವರು. ಚುನಾವಣೆಗೆ ನಾಮಪತ್ರ ಸಲ್ಲಿಕೆಗೂ ಮುನ್ನಾ ಅವರ ಆಶೀರ್ವಾದ ಪಡೆಯಬೇಕಿದ್ದೆ, ಆದರೆ ಸಮಯದ ಅಭಾವದಿ'ದ ಸಾಧ್ಯವಾಗಿರಲಿಲ್ಲ. ಅವರ ಆಶೀರ್ವಾದ ತುಂಬಾ ಎಂದು ಹೇಳಿದರು.

ಭೇಟಿ ಬಗ್ಗೆ ಎಕ್ಸ್‌ ಖಾತೆಯಲ್ಲಿ  ಎಚ್ ಡಿ ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.  ಕೇಂದ್ರದ ಮಾಜಿ ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು, @BJP4Karnataka
 ಪಕ್ಷದ ಹಿರಿಯ ನಾಯಕರು ಆಗಿರುವ ಶ್ರೀ ಎಸ್.ಎಂ.ಕೃಷ್ಣ ಅವರನ್ನು ಸೌಹಾರ್ದಯುವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.

ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP
, ಮಾಜಿ ಉಪ  ಮುಖ್ಯಮಂತ್ರಿಗಳಾದ ಶ್ರೀ @drashwathcn
, ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k
 , ಮಾಜಿ ಸಚಿವರಾದ ಶ್ರೀ ಸಿ.ಎಸ್.ಪುಟ್ಟರಾಜು,  ಬಿಜೆಪಿ ನಾಯಕರಾದ ಶ್ರೀ ಇಂಡುವಾಳು ಸಚ್ಚಿದಾನಂದ, ಶ್ರೀ ಉಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ್ ಹಾಸನ್ ಮೊದಲು ಮೆದುಳು ಪರೀಕ್ಷೆ ಮಾಡಿಸಿಕೊಳ್ಳಬೇಕು: ಅಣ್ಣಾಮಲೈ ಕಿಡಿ