Publish Date: Sun, 22 Nov 2020 (10:46 IST)
Updated Date: Sun, 22 Nov 2020 (10:47 IST)
ಮಂಡ್ಯ : ಮಗನ ಸೋಲನ್ನು ಮರೆಯದ ಹೆಚ್.ಡಿ.ಕುಮಾರಸ್ವಾಮಿ, ಇದೀಗ ಪುತ್ರನ ಸೋಲು ನೆನೆದು ಬೇಸರಗೊಂಡಿದ್ದಾರೆ.
ಮಂಡ್ಯದ ಮದ್ದರೂ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಸೇರಿ ನಮ್ಮನ್ನ ಮುಗಿಸಿ ಬಿಟ್ಟರು. ನಾನು ನಿಖಿಲ್ ಗೆ ಚುನಾವಣೆಗೆ ನಿಲ್ಲಬೇಡ ಎಂದಿದ್ದೆ. ಎಲ್ಲರೂ ಸೇರಿ ಚುನಾವಣೆಗೆ ನಿಲ್ಲಿಸಿ ಬಿಟ್ಟರು. ನಮ್ಮನ್ನು ಮುಗಿಸಲೆಂದೇ ಸೋಲಿಸಿದ್ರು. ಆದ್ರೆ ಮಂಡ್ಯ ಜಿಲ್ಲೆ ಬಗ್ಗೆ ಬೇಸರವಿಲ್ಲ. ನಮ್ಮನ್ನು ಬೆಳೆಸಿದ್ದು ಮಂಡ್ಯ ಜಿಲ್ಲೆ. ಮಂಡ್ಯವನ್ನು ದೇವೇಗೌಡ ಕುಟುಂಬ ಮರೆಯಲ್ಲ ಎಂದು ತಿಳಿಸಿದ್ದಾರೆ.