Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯಗೆ ನಗುತ್ತಲೇ ಟಾಂಗ್ ಕೊಟ್ಟ ಎಚ್ ಡಿ ದೇವೇಗೌಡರು

ಸಿದ್ದರಾಮಯ್ಯಗೆ ನಗುತ್ತಲೇ ಟಾಂಗ್ ಕೊಟ್ಟ ಎಚ್ ಡಿ ದೇವೇಗೌಡರು
ಬೆಂಗಳೂರು , ಮಂಗಳವಾರ, 28 ಆಗಸ್ಟ್ 2018 (08:21 IST)
ಬೆಂಗಳೂರು: ಮತ್ತೆ ಸಿಎಂ ಆಗುವೆ ಎಂದು ಹೇಳಿಕೆ ನೀಡಿದ ಮೈತ್ರಿ ಸರ್ಕಾರದೊಳಗೆ ತಲ್ಲಣ ಮೂಡಿಸಿದ್ದ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಟಾಂಗ್ ಕೊಟ್ಟಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರು ಸಮನ್ವಯ ಸಮಿತಿ ಬಗ್ಗೆ ಪ್ರಶ್ನಿಸಿದಾಗ ನಗುತ್ತಲೇ ಉತ್ತರಿಸಿದ ದೇವೇಗೌಡರು ಸಮನ್ವಯ ಸಮಿತಿ ಎಂದರೇನು? ಅದರ ಜವಾಬ್ಧಾರಿ ಎಂದರೇನು ಎಂದು ನಾಯಕರೇ ಉತ್ತರಿಸಬೇಕು ಎನ್ನುವ ಮೂಲಕ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಇನ್ನು, ಕೊಡಗು ಪ್ರವಾಹದಿಂದ ಆದ ನಷ್ಟ ಪರಿಹಾರಕ್ಕೆ ಶೀಘ್ರವೇ ರಾಜ್ಯ ಸರ್ಕಾರದ ನಿಯೋಗ ದೆಹಲಿಗೆ ತೆರಳಲಿದ್ದು, ಅವರ ಜತೆ ನಾನೂ ಮಾಜಿ ಪ್ರಧಾನಿ ಎಂಬ ಪ್ರತಿಷ್ಠೆ ಮರೆತು ಹೋಗುವೆ. ಕೇಂದ್ರಕ್ಕೆ ಕೊಡಗಿನಲ್ಲಿ ಆದ ನಷ್ಟದ ಅಂಕಿ ಅಂಶ ನೀಡಿ ಮನವರಿಕೆ ಮಾಡುವೆ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸಿಎಂ ಆಗುತ್ತೇನೆಂದು ಸಿದ್ದರಾಮಯ್ಯ ಹೇಳಿಯೇ ಇಲ್ವಂತೆ!