Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಮತ್ತೆ ರೆಬಲ್? ಮಾಜಿ ಸಿಎಂಗೆ ಆಪ್ತರ ಸಾಥ್?

ಸಿದ್ದರಾಮಯ್ಯ ಮತ್ತೆ ರೆಬಲ್? ಮಾಜಿ ಸಿಎಂಗೆ ಆಪ್ತರ ಸಾಥ್?
ಬೆಂಗಳೂರು , ಮಂಗಳವಾರ, 28 ಆಗಸ್ಟ್ 2018 (07:57 IST)
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಮೇಲೆ ಮತ್ತೆ ಬಂಡಾಯವೆದ್ದಿದ್ದಾರೆ. ಸಮನ್ವಯ ಸಮಿತಿ ಸಭೆ ನಡೆಸುವ ವಿಚಾರದಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದ್ದು, ಆಪ್ತರೂ ಸಿದ್ದು ಜತೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಮತ್ತೆ ನಾನೇ ಸಿಎಂ ಆಗುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಅತ್ಯಾಪ್ತರೂ ಅವರ ಕೈ ಬಲಪಡಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ವಿದೇಶಕ್ಕೆ ಹೊರಟ ಸಿದ್ದರಾಮಯ್ಯ ಜತೆ ಅವರ ಆಪ್ತರ ತಂಡವೂ ವಿದೇಶಕ್ಕೆ ತೆರಳಲಿದೆ ಎನ್ನಲಾಗಿದೆ.

ಸಮನ್ವಯ ಸಮಿತಿ ಸಭೆ ನಡೆಸಲು ಆಸಕ್ತಿ ತೋರದೇ ಇರುವುದರಿಂದ ಅಸಮಾಧಾನವೆದ್ದಿತ್ತು. ಬಳಿಕ ಕೆಲವರನ್ನು ಸಮನ್ವಯ ಸಮಿತಿಗೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಇದೀಗ ಸಿದ್ದರಾಮಯ್ಯ ಬೆಂಬಲಿಗರು ಮತ್ತು ಜೆಡಿಎಸ್ ನಡುವೆ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗಿದೆ. ಅಂತೂ ಮತ್ತೆ ಮೈತ್ರಿ ಸರ್ಕಾರದಲ್ಲಿ ಈ ವಿಚಾರ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವುದು ಸುಳ್ಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುತ್ತಿರುವ ಕಾರಿನಲ್ಲಿಯೇ ಅಪ್ರಾಪ್ತೆಯ ಮೇಲೆ ಕಾಮುಕರ ಅಟ್ಟಹಾಸ