Select Your Language

Notifications

webdunia
webdunia
webdunia
webdunia

ಮೈತ್ರಿ ಸರ್ಕಾರ ಎಂದರೆ ಬಲವಂತದ ಮದುವೆಯಂತೆ!

ಸಂಸದ ಸುರೇಶ್ ಅಂಗಡಿ
ಬೆಳಗಾವಿ , ಶನಿವಾರ, 25 ಆಗಸ್ಟ್ 2018 (11:49 IST)
ಬೆಳಗಾವಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವೆಂದರೆ ಬಲವಂತದ ಮದುವೆಯಂತೆ ಎಂದು ಬಿಜೆಪಿ ಸಂಸದ ಸುರೇಶ್ ಅಂಗಡಿ ಲೇವಡಿ ಮಾಡಿದ್ದಾರೆ.
 

ಜನರ ಆಶೀರ್ವಾದವಿದ್ದರೆ ಮತ್ತೆ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ‍್ಯವಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್ ಅಂಗಡಿ ಈ ಮೈತ್ರಿ ಸರ್ಕಾರ ಸದ್ಯದಲ್ಲೇ ಪತನಗೊಳ್ಳಲಿದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಈ ಸರ್ಕಾರ ಒತ್ತಾಯಪೂರ್ವಕ ಮ್ಯಾರೇಜ್ ರೀತಿ ಆಗಿದೆ. ಈ ಮ್ಯಾರೇಜ್ ಎನಿ ಟೈಮ್ ಡೈವರ್ಸ್ ಆಗುತ್ತೆ. ಡೈವರ್ಸ್ ಎನಿ ಮೊಮೆಂಟ್ ಎಂದು ನಾವು ಹೇಳಿದ್ದೇವೆ. ಈಗಾಗಲೇ ಹಗ್ಗ ಜಗ್ಗಾಟ ಆರಂಭವಾಗಿದೆ. ದೇವೇಗೌಡರಿಗೇ ಮೋಸ ಮಾಡಿದ್ದ ಕಾಂಗ್ರೆಸ್. ಈಗ ಅದೇ ಕಾಂಗ್ರೆಸ್ ಗೆ ಕುಮಾರಸ್ವಾಮಿ ಮೋಸ ಮಾಡಲ್ವಾ?’ ಎಂದು ಸುರೇಶ್ ಅಂಗಡಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರ ಪಟ್ಟಿಯಲ್ಲಿ ಯಾರದೋ ಹೆಸರಿನ ಮುಂದೆ ಸನ್ನಿ ಲಿಯೋನ್, ಆನೆ, ಪಾರಿವಾಳದ ಫೋಟೋ!