Select Your Language

Notifications

webdunia
webdunia
webdunia
webdunia

ದೇಶದಾದ್ಯಂತ ಹರ್‌ ಘರ್‌ ತಿರಂಗಾ ಸಂಭ್ರಮ

ದೇಶದಾದ್ಯಂತ ಹರ್‌ ಘರ್‌ ತಿರಂಗಾ ಸಂಭ್ರಮ
bangalore , ಗುರುವಾರ, 11 ಆಗಸ್ಟ್ 2022 (18:43 IST)
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆ ದೇಶಾದ್ಯಂತ ಹರ್‌ ಘರ್‌ ತಿರಂಗಾ ಅಭಿಯಾನ ನಡೆಯುತ್ತಿದ್ದು, ತ್ರಿವರ್ಣ ಧ್ವಜಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಆಗಸ್ಟ್‌ 3 ರಿಂದ 15ರವರೆಗೆ ಪ್ರತಿ ಮನೆ ಮನೆಗೂ ತ್ರಿವರ್ಣ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ದೇಶವಾಸಿಗಳು ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಉತ್ಸುಕರಾಗಿದ್ದಾರೆ.  ಆಜಾದ್‌ ಕೀ ಅಮೃತ್‌ ಮಹೋತ್ಸವ ಹಿನ್ನೆಲೆ ಪ್ರತಿ ಮನೆ ಮೇಲೂ ರಾಷ್ಟ್ರ ಧ್ವಜ ಹಾರಾಡಲಿ ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ಅಸ್ಸಾಂ ಸರ್ಕಾರವೂ ಇಂದು ಗುವಾಹಟಿಯಲ್ಲಿ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಲು ಇಂದು ತಿರಂಗ ಯಾತ್ರೆಯನ್ನು ಹಮ್ಮಿಕೊಂಡಿದೆ. ಯಾತ್ರೆಯಲ್ಲಿ ಹಲವರು ಪಾಲ್ಗೊಂಡಿದ್ದು ಆಜಾದ್‌ ಕೀ ಅಮೃತ್‌ ಮಹೋತ್ಸವದ ಮಹತ್ವವನ್ನು ಸಾರಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಅರಮನೆಗೆ ಗಜಪಡೆ ಆಗಮನ