Select Your Language

Notifications

webdunia
webdunia
webdunia
webdunia

ಗೆದ್ದ ಶಾಸಕರಲ್ಲೇ ಗುದ್ದಾಟ ; ಹೊಸ ಸಚಿವರ ಪಟ್ಟಿ ಸಂಜೆ ರಿಲೀಸ್

ಗೆದ್ದ ಶಾಸಕರಲ್ಲೇ ಗುದ್ದಾಟ ; ಹೊಸ ಸಚಿವರ ಪಟ್ಟಿ ಸಂಜೆ ರಿಲೀಸ್
ಬೆಂಗಳೂರು , ಶನಿವಾರ, 1 ಫೆಬ್ರವರಿ 2020 (11:13 IST)
ರಾಜ್ಯ ರಾಜಕೀಯದಲ್ಲಿ ಬಿಜೆಪಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಅಂತಿಮ ಹಂತಕ್ಕೆ ಬಂದಿದ್ದು, ಬಿಸಿ ಬಿಸಿ ಮಾತುಗಳು ಕೇಳಿಬರುತ್ತಿವೆ.

ಗೆದ್ದ ಶಾಸಕರಲ್ಲಿ 10 ಮಂದಿಗೆ ಮಾತ್ರ ಮಂತ್ರಗಿರಿ ಪಕ್ಕಾ ಅನ್ನೋ ವಿಷಯ ಹೈಕಮಾಂಡ್ ಕೊಡುತ್ತಿದ್ದಂತೆ ಇತ್ತ ಗೆದ್ದವರಲ್ಲಿ ಆಂತರಿಕ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.

ಯಾವ ಒಬ್ಬ ಶಾಸಕ ಸಚಿವ ಸ್ಥಾನದಿಂದ ವಂಚಿತವಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ಗೆದ್ದವರಲ್ಲಿ 10 ಮಂದಿಗೆ ಹಾಗೂ ಮೂಲ ಬಿಜೆಪಿಗರಿಗೆ 3 ಜನರಿಗೆ ಮಂತ್ರಿ ಮಾಡಿ ಅಂತ ಬಿಜೆಪಿ ಹೈಕಮಾಂಡ್ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಫರ್ಮಾನು ಹೊರಡಿಸಿದೆ.

ಯಾವ ಶಾಸಕರ ಮೇಲೆ ಯಡಿಯೂರಪ್ಪ ಪ್ರೀತಿ ತೋರಲಿದ್ದಾರೆ, ಯಾವ ಶಾಸಕರಿಗೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳೋದಿಲ್ಲ ಅನ್ನೋದು ರಾತ್ರಿ ವೇಳೆಗೆ ಸ್ಪಷ್ಟವಾಗಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಿರತೆ ಕಾಯ್ದುಕೊಂಡ ಚಿನ್ನ, ಬೆಳ್ಳಿ ಬೆಲೆ