Publish Date: Wed, 31 Jan 2024 (16:00 IST)
Updated Date: Wed, 31 Jan 2024 (16:25 IST)
ಬೆಂಗಳೂರು-ನಗರದಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಮಾಡಿದ್ದೇನೆ.ಅವರು ಏನು ಕೆಲಸ ಮಾಡಿದ್ದಾರೆ ಅಂತ ರಿವ್ಯೂವ್ ಮಾಡಿದ್ದೇನೆ.ನಾವು ಅಧಿಕಾರಕ್ಕೆ ಎಂಟು ತಿಂಗಳಾಯ್ತು.ಎಂಟು ತಿಂಗಳಿಂದ ಎಷ್ಟು ಬಾರಿ ಜಿಲ್ಲೆಗಳಿಗೆ ಭೇಟಿಮಾಡಿದ್ದೀರಾ?ಏನೇನು ಕೆಲಸ ಮಾಡಿದ್ದೀರಾ?ಯಾವ್ಯಾವ ಲೋಪಗಳಿವೆ, ಅದಕ್ಕೆ ಸಲಹೆಗಳನ್ನು ಕೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ.ಬಡವರ ಕಾರ್ಯಕ್ರಮಗಳು ಅವು.ಪರಿಣಾಮಕಾರಿಯಾಗಿ ನಾವು ಅನುಷ್ಠಾನ ಮಾಡಿದ್ದೇವೆ.ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ.ಬಡವರ ಕಾರ್ಯಕ್ರಮ ಮುಂದುವರೆಯತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.