Publish Date: Mon, 09 May 2022 (20:00 IST)
Updated Date: Mon, 09 May 2022 (20:04 IST)
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಒಂದೊಂದೇ ಸತ್ಯ ಹೊರಗೆ ಬರ್ತಿದೆ.. ಆರೋಪಿಗಳು ಅಕ್ರಮದ ಸಕ್ಸಸ್ ಖುಷಿಗೆ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಗ್ರೂಪ್ ಫೋಟೋದಲ್ಲಿ ಸಿಐಡಿಯಿಂದ ಬಂಧಿತರಾಗಿರುವ ಸಿಪಿಐ ಆನಂದ್ ಮೇತ್ರಿ, ಅಮಾನತಾದ ಡಿವೈಎಸ್ಪಿ ಆರ್.ಆರ್. ಹೊಸಮನಿ, ಇನ್ಸ್ಪೆಕ್ಟರ್ ದಿಲೀಪ್ ಸಾಗರ್ ಕೂಡ ಪೋಸ್ ಕೊಟ್ಟಿದ್ದಾರೆ..ಇನ್ನು, ಫೋಟೋದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಜ್ಞಾನಜ್ಯೋತಿ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಕೂಡ ಇದ್ದಾರೆ..ಅಕ್ರಮ ಎಸಗಿ ಸಕ್ಸಸ್ ಆಗಿರೋದಕ್ಕೆ ಖುಷಿಯಿಂದ ಫೋಟೋ ತೆಗೆಸಿಕೊಂಡು ದಿವ್ಯಾ ಹಾಗರಗಿ & ಟೀಮ್ ಸಂತಸಪಟ್ಟಿದ್ದಾರೆ..ಅಲ್ಲದೇ, ಪೊಲೀಸರ ಜೊತೆಗೂಡಿ ಅಕ್ರಮವೆಸಗಿ ಖುಷಿ ಪಟ್ಟಿರೋದು ವ್ಯವಸ್ಥೆಯನ್ನೇ ಅಣಕಿಸುವಂತಾಗಿದೆ.