Publish Date: Mon, 09 May 2022 (19:57 IST)
Updated Date: Mon, 09 May 2022 (20:00 IST)
ಹಿಂದೂಪರ ಸಂಘಟನೆಗಳ ಲೌಡ್ ಸ್ಪೀಕರ್ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಹಿನ್ನಡೆಯಾಗಿದೆ..ದೇವಸ್ಥಾನದ ಮೇಲೆ ಲೌಡ್ ಸ್ಪೀಕರ್ ಹಾಕೋದಾಗಿ ಹಿಂದೂಪರ ಸಂಘಟನೆಗಳು ಹೇಳಿದ್ವು..ಆದ್ರೆ, ಸಂಘಟನೆಗಳ ಪ್ರಯತ್ನಕ್ಕೆ ಪೊಲೀಸರ ಮುನ್ನೆಚ್ಚರಿಕಾ ಕ್ರಮದಿಂದ ಬಹುತೇಕ ದೇವಸ್ಥಾನಗಳಿಗೆ ಭಾರಿ ಭದ್ರತೆ ನೀಡಲಾಯ್ತು..ಹೀಗಾಗಿ ಹಿಂದೂ ಸಂಘಟನೆಗಳ ಪ್ರಯತ್ನ ವಿಫಲವಾಯ್ತು..ಪಾದರಾಯನಪುರದ ಕೋದಂಡರಾಮ ದೇವಸ್ಥಾನ, ಕೆ.ಆರ್.ಮಾರುಕಟ್ಟೆಯ ಗಣಪತಿ ದೇವಸ್ಥಾನ, ಶಾಂತಿನಗರದ ಆಂಜನೇಯ ದೇವಸ್ಥಾನ, ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇಗುಲಗಳಲ್ಲಿ ಲೌಡ್ ಸ್ಪೀಕರ್ ಅಭಿಯಾನ ಪ್ಲ್ಯಾನ್ ಫ್ಲಾಪ್ ಆಯ್ತು.. ನಮಗೆ ದೇವಸ್ಥಾನದ ಬಳಿ ಹೋಗೋಕೂ ಬಿಡ್ತಿಲ್ಲ & ಪ್ರತಿಭಟನೆಗೂ ಅವಕಾಶ ಕೊಡ್ತಿಲ್ಲ ಎಂದು ಸರ್ಕಾರದ ವಿರುದ್ದ ಹಿಂದೂಪರ ಸಂಘಟನೆಗಳು ಕಿಡಿಕಾರಿವೆ.