Publish Date: Tue, 25 Apr 2023 (17:29 IST)
Updated Date: Tue, 25 Apr 2023 (19:33 IST)
ಇವತ್ತಿಂದ ಚುನಾವಣೆ ಮುಗಿಯೋವರೆಗೂ ನನ್ನ ಪ್ರಚಾರ ನಡೆಯಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.ದೇವದುರ್ಗ, ಮಾಯಕೊಂಡ, ಜಗಳೂರಿನಲ್ಲಿ ಪ್ರಚಾರಕ್ಕೆ ಹೋಗ್ತಿದ್ದೀನಿ.ವಾತಾವಾರಣ ನಿರೀಕ್ಷೆ ಮೀರಿ ನಮ್ಮಪರ ಇದೆ.ಎಲ್ಲಾ ಕಡೆ ಬಿಜೆಪಿ ಪರ ಇದೆ.ಮೋದಿ, ಅಮಿತ್ ಶಾ ಬಂದು ಹೋದ ಮೇಲೆ ಮತ್ತಷ್ಟು ಅನುಕೂಲ ಆಗಿದೆ.ಯಾರ ಬೆಂಬಲವೂ ಇಲ್ಲದೆ ಸರ್ಕಾರ ರಚನೆ ನಿಶ್ಚಿತ.ದೇವದುರ್ಗ ಹೋದಾಗ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ರು.ಯಾರ ಬೆಂಬಲ ಇಲ್ಲದೆ ಸರ್ಕಾರ ರಚನೆ ಮಾಡ್ತೀವಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಈ ವೇಳೆ ಬಿ.ಎಲ್ ಸಂತೋಷ್ ಭೇಟಿ ವಿಚಾರವಾಗಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು,ಪೊಲಿಟಿಕಲ್ ಸುಚಿಯೇಷನ್ ಹೇಗಿದೆ.ವಾತಾವರಣ ಹೇಗಿದೆ ಅನ್ನೋದ್ರ ಬಗ್ಗೆ ಚರ್ಚೆ ನಡೆಸಿದ್ರು.ಹಿರಿಯರಾಗಿ ಸಲಹೆ ನೀಡಿದ್ರು.ಸಂತೋಷ್ ಅವರಿಗೂ ಸಮಾಧಾನ ಇದೆ.130ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಅಂತ ಯಡಿಯೂರಪ್ಪ ಹೇಳಿದ್ದಾರೆ.