Select Your Language

Notifications

webdunia
webdunia
webdunia
webdunia

ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್

ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್
ಹುಬ್ಬಳ್ಳಿ , ಶುಕ್ರವಾರ, 18 ಅಕ್ಟೋಬರ್ 2019 (15:05 IST)
ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್ ನೀಡಲು ಸರಕಾರ ಮುಂದಾಗಿದೆ.

ಪೊಲೀಸರಿಗೆ ನೀಡುವ ರಿಸ್ಕ್ ಅಲಯನ್ಸ್ ಹೆಚ್ಚಳ ಮಾಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಸಿಎಂ ಹಾಗೂ ಗೃಹ ಸಚಿವರು ರಸ್ತೆ ಮುಖಾಂತರ ಆಗಮಿಸುವ ವೇಳೆ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ರಸ್ತೆಯುದ್ದಕ್ಕೂ ಕಾದು ರಕ್ಷಣೆ ನೀಡಿದ್ದರು.

ಪೊಲೀಸರ ಈ ಕಾರ್ಯವೈಖರಿ ಬಗ್ಗೆ ಸಿಎಂ ಬಿ.ಎಸ್.ವೈ ಗಮನ ಹೋಗಿದೆ. ಅಲ್ಲದೇ ಪೊಲೀಸರ ರಿಸ್ಕ್ ಅಲಯನ್ಸ್ ಹೆಚ್ಚಳ ಮಾಡುವ ಅಗತ್ಯತೆಯ ಬಗ್ಗೆ ಗೃಹ ಸಚಿವರು ಸಿಎಂಗೆ ಮನವಿ ಮಾಡಿದ್ದಾರೆ. ಈ ಪ್ರಸ್ತಾಪಕ್ಕೆ ಸಿಎಂ ಸಪೋರ್ಟ್ ಮಾಡಿದ್ದಾರೆ. ನೆರೆ ಪರಿಹಾರ ಒಂದು ಹಂತ ತಲುಪಿದ ಕೂಡಲೇ ಈ ಬಗ್ಗೆ ಚಿಂತನೆ ಮಾಡೋಣ ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ವಿಷಯಕ್ಕೆ ಹೀಗಾ ಮಾಡೋದು?