Select Your Language

Notifications

webdunia
webdunia
webdunia
webdunia

ಗೋಲಿಬಾರ್ – ಮತ್ತೊಮ್ಮೆ ಬೆಚ್ಚಿಬಿದ್ದ ಮಂಗಳೂರು

ಗೋಲಿಬಾರ್ – ಮತ್ತೊಮ್ಮೆ ಬೆಚ್ಚಿಬಿದ್ದ ಮಂಗಳೂರು
ಮಂಗಳೂರು , ಗುರುವಾರ, 16 ಜನವರಿ 2020 (17:12 IST)
ಗೋಲಿಬಾರ್ ಘಟನೆ ಖಂಡಿಸಿ ಲಕ್ಷಾಂತರ ಜನರು ಬೀದಿಗಿಳಿದು ನಡೆಸಿದ ಹೋರಾಟ ಮತ್ತೆ ರಾಜ್ಯದ ಗಮನ ಸೆಳೆದಿದ್ದು, ಮಂಗಳೂರಿನತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದೆ.
 

NRC, CAA ಹಾಗೂ ಮಂಗಳೂರು ಗೋಲಿಬಾರ್ ಘಟನೆ ಖಂಡಿಸಿ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ಒಟ್ಟು 33ಕ್ಕೂ ಹೆಚ್ಚು ಸಮಾನ ಮನಸ್ಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.

ಸುಮಾರು ಎರಡು ಲಕ್ಷ ಜನ್ರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಬೃಹತ್ ಸಮಾವೇಶದ ಮೇಲೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದರು. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದ ಪೊಲೀಸ್ ಇಲಾಖೆ ಮಂಗಳೂರಿನ ಹಲವೆಡೆಗೆ ಬಿಗಿ ಭದ್ರತೆಯನ್ನು ನಿಯೋಜಿಸಿತ್ತು.

ಉಳ್ಳಾಲದ ಕೋಟೇಪುರದಿಂದ ಅಡ್ಯಾರ್ ಕಣ್ಣೂರುವರೆಗೆ ನದಿಯಲ್ಲಿ 100 ದೋಣಿಯಲ್ಲಿ ಬೃಹತ್ Rally ಮೂಲಕ ಜನರು ಬಂದ್ರು. ಕಾಂಗ್ರೆಸ್, ಜೆಡಿಎಸ್, ಪಿಎಫ್ ಐ, ಎಸ್ಡಿಪಿಐ, skssf, ಜಮಾಅತೆ ಇಸ್ಲಾಮಿ ಹಿಂದ್, ssf, ಸಲಫಿ ಸಂಘಟನೆಗಳು ಸೇರಿದ ವಿವಿಧ ಸಮಾನ ಮನಸ್ಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ವು.  



Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಸಮಾರಂಭಕ್ಕಾಗಿ ಕೊಡಲಿ ಏಟು ಹಾಕೋದು ಸರಿನಾ?