Publish Date: Wed, 15 Jan 2020 (14:57 IST)
Updated Date: Wed, 15 Jan 2020 (14:59 IST)
ಕೇಂದ್ರ ಸರಕಾರವು ಹೊಸ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದರ ವಿರುದ್ಧ ವೈದ್ಯರು ಗರಂ ಆಗಿದ್ದಾರೆ.
ಕೇಂದ್ರದ ಉದ್ದೇಶಿತ ನೀತಿಯು ಈ ದೇಶದ ಸಂವಿಧಾನದ ಉಲ್ಲಂಘನೆಯಾಗಿದೆ. ಇದರಿಂದ ದೇಶದ ಜನರಲ್ಲಿ ಧರ್ಮದ ವಿರೋಧ ನೀತಿ ಅನುಸರಿಸಲು ಕಾರಣವಾಗುತ್ತದೆ. ಸಿಎಎ ವಿರೋಧಿಸಿ ಜ. 16 ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಹೀಗಂತ ವೈದ್ಯರ ತಂಡದ ಮುಖಂಡ ಡಾ. ಶಕೀಲ ಖಾನ್ ಹೇಳಿದ್ದಾರೆ.
ಸಂವಿಧಾನದ ಅನುಚ್ಛೇದ 14 ನ್ನು ಕೇಂದ್ರ ಸರಕಾರ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ಧರ್ಮಗಳ ನಡವೆ ಅಂತರವನ್ನು ತಂದು ದೇಶದಲ್ಲಿ ಜನರನ್ನು ಒಂದುಗೂಡಿಸುವ ಬದಲು ಹೊಸ ಕಾಯ್ದೆ ಒಡೆದು ಆಳುವ ನೀತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜ. 16 ರಂದು ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಮೆಡಿಕಲ್, ಹೋಮಿಯೋಪತಿ, ಆಯುರ್ವೇದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದಿದ್ದಾರೆ.