Select Your Language

Notifications

webdunia
webdunia
webdunia
webdunia

ಬನಶಂಕರಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ

ಬನಶಂಕರಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ
ಬೆಳಗಾವಿ , ಭಾನುವಾರ, 1 ಜುಲೈ 2018 (20:14 IST)
ಶಕ್ತಿದೇವತೆ ಬನಶಂಕರಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ರಾತ್ರಿ ಹೊತ್ತು ಬೀಗ ಮುರಿದು ಕಳ್ಳತನ ಮಾಡಿರುವ ಖದೀಮರು ಪಲಾಯನಗೈದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 
 
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಬನಶಂಕರಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ದೇವಿ ಮೂರ್ತಿಯ ಮೇಲಿದ್ದ ತಾಳಿ, ಕಿವಿಯೋಲೆ, ಮೂಗುತಿ, ಕಿರೀಟ ಕಳ್ಳತನ ಮಾಡಲಾಗಿದೆ. 
 
ಅಂದಾಜು 40 ಗ್ರಾಂ ಚಿನ್ನಾಭರಣದ ಒಡವೆಗಳು, 500 ಗ್ರಾಂ ಬೆಳ್ಳಿಯ ಕಿರೀಟ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ನಿತ್ಯದಂತೆ ಪೂಜೆ ಮಾಡಲು ಬಂದಾಗ ಪೂಜಾರಿಗೆ ಕಳ್ಳತನವಾಗಿರುವ ವಿಷಯ ಗೊತ್ತಾಗಿದೆ. ಬೈಲಹೊಂಗಲ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಲಿಂಗಾರೆಡ್ಡಿ ಪರ ಬ್ಯಾಟ್ ಸಂಸದ ಡಿ.ಕೆ.ಸುರೇಶ್ ಬ್ಯಾಟ್