Select Your Language

Notifications

webdunia
webdunia
webdunia
webdunia

ಅದ್ಧೂರಿ ಕಲ್ಯಾಣೋತ್ಸವ: ಸಹಸ್ರಾರು ಭಕ್ತರು ಸಾಕ್ಷಿ

ಅದ್ಧೂರಿ ಕಲ್ಯಾಣೋತ್ಸವ: ಸಹಸ್ರಾರು ಭಕ್ತರು ಸಾಕ್ಷಿ
ಶ್ರೀನಿವಾಸಪುರ , ಭಾನುವಾರ, 1 ಜುಲೈ 2018 (16:26 IST)
ಸಿಂಹಾಚಲಂನ ವರಮಹಾಲಕ್ಷ್ಮೀ- ನರಸಿಂಹ ಸ್ವಾಮಿಗೆ ಕಲ್ಯಾಣೋತ್ಸವದ ಸಡಗರ. ಈ ಕಲ್ಯಾಣೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. 
 
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಸಿಂಹಾಚಲಂನ ವರಮಹಾಲಕ್ಷ್ಮೀ ಹಾಗೂ ನರಸಿಂಹ ಸ್ವಾಮಿಯ ಅದ್ಧೂರಿ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಸತತ ನಾಲ್ಕನೇ ವರ್ಷ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳು, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ಭಕ್ತರು ಸಾಕ್ಷಿಯಾದರು. ಆಂಧ್ರಪ್ರದೇಶದ ಸಿಂಹಾಚಲಂನಿಂದ ಬಂದ ವರಮಹಾಲಕ್ಷ್ಮೀ ನರಸಿಂಹ ಸ್ವಾಮಿಯ ಉತ್ಸವ ಮೂರ್ತಿಗಳಿಗೆ ಕಲ್ಯಾಣೋತ್ಸವ ನೆರವೇರಿಸಲಾಯಿತು.

ಅಂದಹಾಗೆ ಸ್ಪೀಕರ್ ರಮೇಶ್ ಕುಮಾರ ನೇತೃತ್ವದಲ್ಲಿ ಈ ಕಲ್ಯಾಣೋತ್ಸವ ನಡೆದದ್ದು ವಿಶೇಷವಾಗಿತ್ತು. 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿ ಮುದ್ದೆ ಉಂಡವನೇ ಮಹಾಶೂರ: ಸ್ಪರ್ಧೆಯಲ್ಲಿ ಗೆದ್ದವರು ಯಾರು ಗೊತ್ತಾ?