Select Your Language

Notifications

webdunia
webdunia
webdunia
webdunia

ಸ್ವಾಮೀಜಿಗೆ ಸ್ಪೀಕರ್ ಪೂಜೆ, ಸಿಎಂ ಕುಮಾರಸ್ವಾಮಿಯಿಂದ ಮನೆಯಲ್ಲೇ ಚಂಡಿಕಾ ಪಾರಾಯಣ!

ಸ್ವಾಮೀಜಿಗೆ ಸ್ಪೀಕರ್ ಪೂಜೆ, ಸಿಎಂ ಕುಮಾರಸ್ವಾಮಿಯಿಂದ ಮನೆಯಲ್ಲೇ ಚಂಡಿಕಾ ಪಾರಾಯಣ!
ಬೆಂಗಳೂರು , ಶುಕ್ರವಾರ, 8 ಜೂನ್ 2018 (10:07 IST)
ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪೂಜೆ, ಪುನಸ್ಕಾರಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಿಎಂ ಕುಮಾರಸ್ವಾಮಿ ಇಂದು ಯಾವುದೇ ಅಧಿಕೃತ ಕಾರ್ಯಕ್ರಮಗಳಿಟ್ಟುಕೊಳ್ಳದೇ ತಮ್ಮ ಮನೆಯಲ್ಲಿ ಚಂಡಿಕಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಆದ ಮೇಲೆ ವಾರಕ್ಕೊಮ್ಮೆ ಎಂಬಂತೆ ಕುಮಾರಸ್ವಾಮಿ ಮನೆಯಲ್ಲಿ ಪೂಜೆ ನಡೆಯುತ್ತಿದೆ.

ಇನ್ನೊಂದೆಡೆ ಹಿಂದೆ ಸಚಿವರಾಗಿದ್ದಾಗ ಮೂಢ ನಂಬಿಕೆ ವಿರೋಧಿ ಮಾತನಾಡಿದ್ದ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ಚಿಕ್ಕಮಗಳೂರಿನ ಗೌರಿಗದ್ದೆ ಬಳಿಯ ಆಶ್ರಮದ ವಿನಯ್ ಗುರೂಜಿ ಕಾಲಿಗೆ ಬಿದ್ದು, ಪಾದ ಪೂಜೆ ಮಾಡಿದ್ದಾರೆ. ಅಂತೂ ನಾಯಕರ ದೈವ ಭಕ್ತಿ ಜೋರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಪಘಾತಕ್ಕೀಡಾದ ನಟ ಪುನೀತ್ ರಾಜ್ ಕುಮಾರ್ ಕಾರು