Select Your Language

Notifications

webdunia
webdunia
webdunia
webdunia

ಗಲ್ಲಿ ಗಲ್ಲಿಯಲ್ಲಿ ಗಣೇಶನ ಕೂರಿಸಬೇಕಾದರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು!

ಗಲ್ಲಿ ಗಲ್ಲಿಯಲ್ಲಿ ಗಣೇಶನ ಕೂರಿಸಬೇಕಾದರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು!
ಬೆಂಗಳೂರು , ಗುರುವಾರ, 20 ಆಗಸ್ಟ್ 2020 (10:33 IST)
ಬೆಂಗಳೂರು: ಈ ಬಾರಿ ಕೊರೋನಾ ನಡುವೆಯೂ ಗಣೇಶ ಹಬ್ಬ ಆಚರಿಸಲು ಜನ ಸಜ್ಜಾಗುತ್ತಿದ್ದಾರೆ. ಹಾಗಿದ್ದರೂ ಲಾಕ್ ಡೌನ್ ಸಂಪೂರ್ಣ ತೆರವಾಗದ ಹಿನ್ನಲೆಯಲ್ಲಿ ಗಣೇಶೋತ್ಸವ ಆಚರಿಸಲು ಒಪ್ಪಿಗೆ ಸಿಗಬಹುದೇ ಎಂದು ಅನುಮಾನಗಳು ಜನರಲ್ಲಿವೆ.


ಪ್ರತೀ ಬಾರಿಯಂತೆ ಈ ಬಾರಿ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗದು. ಹಾಗಿದ್ದರೂ ಸರ್ಕಾರ ನೀಡಿರುವ ಕೆಲವು ಸಲಹೆ ಸೂಚನೆ ಪಾಲಿಸಿದರೆ ನಿಮ್ಮ ಗಲ್ಲಿಯಲ್ಲಿ ಗಣೇಶೋತ್ಸವ ಆಚರಿಸುವುದಕ್ಕೆ ಅಡ್ಡಿಯಿರದು.

  • ಈ ಬಾರಿ ಹಬ್ಬಕ್ಕೆ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿ ಕೂರಿಸಲು ಆಯಾ ಸ್ಥಳೀಯಾಡಳಿತದ ಒಪ್ಪಿಗೆ ಬೇಕು. ಆದಷ್ಟು ಒಂದು ವಾರ್ಡ್ ಗೆ ಒಂದೇ ಗಣೇಶನ ಮೂರ್ತಿ ಇಟ್ಟರೆ ಉತ್ತಮ.
  • ಗಣೇಶನ ಮೂರ್ತಿ ಇಟ್ಟಿದ್ದೇವೆಂದು ಸಿಕ್ಕಾಪಟ್ಟೆ ಸೌಂಡ್ ಮಾಡಿ ಮ್ಯೂಸಿಕ್ ಹಾಕೋದು, ಜನ ಸೇರಿ ಕುಣಿಯೋದು ಮಾಡೋ ಹಾಗಿಲ್ಲ.
  • ಅವರವರ ಮನೆಗಳಲ್ಲೇ ಗಣೇಶನ ಮೂರ್ತಿ ಕೂರಿಸಲು ಅಡ್ಡಿಯಿಲ್ಲ. ಆದರೆ ಹೊರಗೆ ವಿಸರ್ಜನೆ ಮಾಡಲು ಮೆರವಣಿಗೆ ಮೂಲಕ ತಾರದೇ ಮನೆಯೊಳಗೇ ವಿಸರ್ಜನೆ ಮಾಡಬೇಕು.
  • ಸಿಂಪಲ್ ಆಗಿ ಮನೆಯೊಳಗೇ ಗಣೇಶನ ಹಬ್ಬ ಮಾಡಲು ಯಾವುದೇ ನಿಬಂಧನೆ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

SDPI ಬ್ಯಾನ್ ಗೆ ಒತ್ತಡ; ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ