Publish Date: Wed, 19 Aug 2020 (11:10 IST)
Updated Date: Wed, 19 Aug 2020 (11:12 IST)
ಡೆಡ್ಲಿ ಕೊರೊನಾ ನಡುವೆ ಬಂದಿರುವ ಗಣೇಶ ಹಬ್ಬದ ಆಚರಣೆಗೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
ಹೊಸ ರೂಲ್ಸ್ ಗಳನ್ನು ಸರಕಾರ ಬಿಡುಗಡೆಗೊಳಿಸಿದ್ದು, ನೂತನ ನಿಯಮಾವಳಿ ಪ್ರಕಾರ ಮಾತ್ರ ಗಣೇಶ ಹಬ್ಬ ಮಾಡಬೇಕಾಗಿದೆ.
20 ಜನ ಮಾತ್ರ ಇರಬೇಕು. ಸಭೆ, ಮೆರವಣಿಗೆಗೆ ನಿಷಿದ್ಧ, ಸಾರ್ವಜನಿಕ ಸ್ಥಳದಲ್ಲಿ ಗರಿಷ್ಠ 4 ಅಡಿ, ಮನೆಗಳಲ್ಲಿ 2 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು.
ಹಳ್ಳಿಗೆ ಒಂದು ಹಾಗೂ ವಾರ್ಡಿಗೆ ಒಂದು ಗಣೇಶ ಮೂರ್ತಿ ಇಡಬೇಕು. ಸ್ಥಳೀಯ ಆಡಳಿತದಿಂದ ಪರವಾನಿಗೆ ಪಡೆದುಕೊಳ್ಳಬೇಕು ಎಂಬಿತ್ಯಾದಿ ಸೂಚನೆಗಳನ್ನು ಕೊಡಲಾಗಿದೆ.