Select Your Language

Notifications

webdunia
webdunia
webdunia
webdunia

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಮುಂದೆ ದೇವರು ಪ್ರತ್ಯಕ್ಷ...!!!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಮುಂದೆ ದೇವರು ಪ್ರತ್ಯಕ್ಷ...!!!
ಬೆಂಗಳೂರು , ಸೋಮವಾರ, 10 ಅಕ್ಟೋಬರ್ 2022 (16:10 IST)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
 
ಸಚಿವರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
 
ಶಂಕು ಸ್ಥಾಪನೆ ಮುಗಿಸಿ ನಂತರ ಡಿ.ಸಿ.ಸಿ ಬ್ಯಾಂಕ್ ನಿಂದ ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿಕ್ಕಬಳ್ಳಾಪುರ ತಾಲೂಕಿನ ಮುಷ್ಟೂರು ಗ್ರಾಮದ ವೇದಿಕೆಗೆ ಆಗಮಿಸಿದ್ದರು.
 
ಸಚಿವರು ವೇದಿಕೆಗೆ ಬರುತ್ತಿದ್ದಂತೆ., ಮಹಿಳೆಯೊಬ್ಬರು ಮೈ ಮೇಲೆ ದೇವರು ಬಂದ ಹಾಗೆ ವರ್ತಿಸಿದ್ದಾರೆ. ಮುಷ್ಟೂರು ಗ್ರಾಮದ ರಾಧಮ್ಮ ಎಂಬ ಮಹಿಳೆ ತನ್ನ ಮೇಲೆ ಗ್ರಾಮದ ಮಹೇಶ್ವರಮ್ಮ ದೇವಿ ಬಂದಿದ್ದಾಳೆ. ದೇವಸ್ಥಾನ ಕಾಮಗಾರಿ ನಿರ್ವಹಿಸಲು ಸಚಿವರಿಗೆ ತಿಳಿಸಬೇಕು ತಾನು ದೇವಿ ಮಹೇಶ್ವರಮ್ಮ ಅವತಾರ ತನ್ನನ್ನು ಯಾರು ತಡೆಯಬೇಡಿ ಎಂದು ಕೂಗಾಡಿದರು. ಮೈ ಮೇಲೆ ದೇವರು ಬಂದ ಹಾಗೆ ಕೂಗಾಡಿ ನಾಲಿಗೆ ಹೊರಗೆ ಚಾಚಿ ಕಣ್ಣು ಕೆಂಪಗೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಕರೆದುಕೊಂಡು ಹೋಗಿ ಸಮಾಧಾನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೇಡು ತೀರಿಸಿಕೊಂಡ ರಷ್ಯಾ! ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ