Select Your Language

Notifications

webdunia
webdunia
webdunia
webdunia

ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ರೂಪಾಯಿ ಪಂಗನಾಮ

ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ರೂಪಾಯಿ ಪಂಗನಾಮ
ಧಾರವಾಡ , ಮಂಗಳವಾರ, 23 ಜುಲೈ 2019 (18:31 IST)
ಸರಕಾರಿ ನೌಕರಿ ಕೊಡಿಸೋದಾಗಿ ವ್ಯಕ್ತಿಯೊಬ್ಬರಿಂದ ಲಕ್ಷ ಲಕ್ಷ ರೂಪಾಯಿ ದೋಚಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಭೀಮಾಶಂಕರ ಗೊಜ್ಜಿ ಎಂಬುವರೇ ನೌಕರಿ ಆಸೆಗೆ ಹಣ ಕಳೆದುಕೊಂಡಿದ್ದಾರೆ.

ಧಾರವಾಡ ಸಪ್ತಾಪೂರದ ಬಾರಾಕೊಟ್ರಿ ನಿವಾಸಿ ಭೀಮಪ್ಪ ಪೂಜಾರ್ ಕೆಲಸ ಕೊಡಿಸೋದಾಗಿ ಭೀಮಾಶಂಕರ್ ರಿಂದ ಹಂತ, ಹಂತವಾಗಿ 4 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ.

ಮುಖ್ಯಮಂತ್ರಿ ಹಾಗೂ ಸಚಿವರು ತಮಗೆ ಆಪ್ತರಾಗಿದ್ದಾರೆ. ಹೀಗಾಗಿ ಧಾರವಾಡದ ವಿಶ್ವವಿದ್ಯಾಲಯದಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ದೂರಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

‘ದೇಶ ಹಾಳು ಮಾಡೋಕೆ ಸೋಷಿಯಲ್ ಮೀಡಿಯಾ ಸಾಕು ಎಂದ ಕುಮಾರಸ್ವಾಮಿ’