Select Your Language

Notifications

webdunia
webdunia
webdunia
webdunia

ಮಂಗಳವಾರ ಆಂಜನೇಯ ಸ್ವಾಮಿಗೆ ಇದರಿಂದ ಪೂಜಿಸಿದರೆ ಕಾಡಲ್ಲ ಆರೋಗ್ಯ ಸಮಸ್ಯೆ

ಮಂಗಳವಾರ ಆಂಜನೇಯ ಸ್ವಾಮಿಗೆ ಇದರಿಂದ ಪೂಜಿಸಿದರೆ ಕಾಡಲ್ಲ ಆರೋಗ್ಯ ಸಮಸ್ಯೆ
ಬೆಂಗಳೂರು , ಮಂಗಳವಾರ, 23 ಜುಲೈ 2019 (09:09 IST)
ಬೆಂಗಳೂರು : ಮನುಷ್ಯರೆಂದ ಮೇಲೆ ಸಾಮಾನ್ಯವಾಗಿ ಒಂದಲ್ಲ ಒಂದು ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಆದರೆ ಪದೇ ಪದೇ ಆರೋಗ್ಯ ಕೆಡುತ್ತಿದ್ದರೆ ಅಂತವರು ಮಂಗಳವಾರದಂದು ಆಂಜನೇಯ ಸ್ವಾಮಿಗೆ ಇದನ್ನು ಅರ್ಪಿಸಿ.




ಪ್ರತಿ ಮಂಗಳವಾರ ತಲೆಸ್ನಾನ ಮಾಡಿ ದೇವರ ಮನೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಮೊದಲಿಗೆ ವಿನಾಯಕನನ್ನು ಸ್ಮರಿಸಿದ ನಂತರ ಸೀತಾ ರಾಮ ಸಮೇತವಾಗಿ ಇರುವ ಆಂಜನೇಯ ಸ್ವಾಮಿ ಫೋಟೋಕ್ಕೆ ಕುಂಕುಮ ಅಥವಾ ಸಿಂಧೂರದಿಂದ ಬೊಟ್ಟು ಇಡಬೇಕು. ಸ್ವಾಮಿಗೆ 11 ಕೆಂಪು ಬಣ್ಣದ ಹೂವನ್ನು ಸಮರ್ಪಿಸಬೇಕು. ಎಳ್ಳೆಣ್ಣೆಯಿಂದ ದೀಪಾರಾಧನೆ ಮಾಡಬೇಕು. ನಂತರ ಸ್ವಾಮಿಗೆ ಹನುಮಾನ್ ಚಾಲೀಸವನ್ನು ಪಠಿಸುತ್ತ ಬಿಲ್ವ ಪತ್ರೆಯನ್ನು ಸಮರ್ಪಿಸಬೇಕು.


“ ಶ್ರೀ ರಾಮ ರಾಮ ರಾಮೇತಿ ರಮೇ ರಾಮ ಮನೋರಮೆ ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೆ”ಈ ಮಂತ್ರವನ್ನು ಪಠಿಸಿದ ನಂತರ ಬಾಳೆ ಹಣ್ಣನ್ನು ನೈವೇದ್ಯವಾಗಿ ಇಡಬೇಕು. ನಂತರ ಆರತಿ ಮಾಡಬೇಕು. ಹೀಗೆ ಹನ್ನೊಂದು ವಾರಗಳು ಹೀಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ಆರೋಗ್ಯ ಚೇತರಿಕೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೇವತಿ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?