Select Your Language

Notifications

webdunia
webdunia
webdunia
webdunia

ಬಿಜೆಪಿಯವರನ್ನು ಸೆಳೆಯುವ ಕೆಲಸದಲ್ಲಿ ಸರ್ಕಾರದೊಂದಿಗೆ ಬಿಜೆಪಿಯ ನಾಯಕರು ಶಾಮೀಲು-ಬೊಸ ಬಾಂಬ್ ಸಿಡಿಸಿದ ಅರವಿಂದ್ ಲಿಂಬಾವಳಿ

ಬಿಜೆಪಿಯವರನ್ನು ಸೆಳೆಯುವ ಕೆಲಸದಲ್ಲಿ ಸರ್ಕಾರದೊಂದಿಗೆ ಬಿಜೆಪಿಯ ನಾಯಕರು ಶಾಮೀಲು-ಬೊಸ ಬಾಂಬ್ ಸಿಡಿಸಿದ ಅರವಿಂದ್ ಲಿಂಬಾವಳಿ
ಬೆಂಗಳೂರು , ಸೋಮವಾರ, 22 ಜುಲೈ 2019 (13:57 IST)
ಬೆಂಗಳೂರು : ರಾಜ್ಯ ಸರ್ಕಾರ ಪಿತೂರಿ ನಡೆಸುತ್ತಿದೆ. ಬಿಜೆಪಿಯ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಬಿಜೆಪಿಯ ನಾಯಕರೂ ಕೂಡ ಈ ಪಿತೂರಿಯ ಭಾಗವಾಗಿದ್ಧಾರೆಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಅವರು ಬಾಂಬ್ ಸಿಡಿಸಿದ್ದಾರೆ.



ಮುಖ್ಯಮಂತ್ರಿಗಳ ವಿಶ್ವಾಸ ಮತ ಯಾಚನೆ ಇವತ್ತು ನಡೆಯುತ್ತೆ, ಆವತ್ತು ನಡೆಯುತ್ತೆ ಎಂಬ ಖಚಿತತೆ ಇನ್ನೂ ಸಿಕ್ಕಿಲ್ಲ. ಬಹುತೇಕ ಅತೃಪ್ತ ಶಾಸಕರು ಒಗ್ಗಟ್ಟಿನಿಂದಿದ್ದು ಸದನಕ್ಕೆ ಬರುವುದಿಲ್ಲ ಆದರೂ ಕೇಸರಿ ಪಾಳಯದಲ್ಲಿ ಆತಂಕದ ಛಾಯೆ ಸ್ವಲ್ಪ ಮಟ್ಟಕ್ಕೆ ಇದ್ದೇ ಇದೆ. ಸರ್ಕಾರದಿಂದ ಬಿಜೆಪಿಯ ಮೇಲೆಯೇ ಆಪರೇಷನ್ ನಡೆಯುವ ಸುದ್ದಿಗಳೂ ಇವೆ ಎಂದು ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

 

ರಾಜ್ಯ ಸರ್ಕಾರ ಪಿತೂರಿ ನಡೆಸುತ್ತಿದೆ. ಬಿಜೆಪಿಯ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಸಚಿವರೊಬ್ಬರು ದೂರವಾಣಿ ಕರೆ ಮಾಡಿ ತನ್ನನ್ನೂ ಸೆಳೆಯಲು ಯತ್ನಿಸಿದರು. ಬಿಜೆಪಿಯ ನಾಯಕರೂ ಕೂಡ ಈ ಪಿತೂರಿಯ ಭಾಗವಾಗಿದ್ಧಾರೆ. ಬಿಜೆಪಿಯ ಒಂದಿಬ್ಬರು ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಸಂದರ್ಭ ಬಂದಾಗ ಎಲ್ಲಾ ವಿವರಗಳನ್ನ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರವೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುವೆ- ಬಿಜೆಪಿ ನಿಯೋಗಕ್ಕೆ ಸ್ಪೀಕರ್ ಭರವಸೆ