Select Your Language

Notifications

webdunia
webdunia
webdunia
webdunia

ಭೀಕರ ಅಪಘಾತದಲ್ಲಿ ಕುಟುಂಬದ ನಾಲ್ವರು ದುರ್ಮರಣ

ಭೀಕರ ಅಪಘಾತದಲ್ಲಿ ಕುಟುಂಬದ ನಾಲ್ವರು ದುರ್ಮರಣ
ಶಿವಮೊಗ್ಗ , ಸೋಮವಾರ, 7 ನವೆಂಬರ್ 2022 (12:06 IST)
ಶಿವಮೊಗ್ಗ : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಮಗು ಸೇರಿ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿದ್ದು,

ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಮಂಚಿನಕೊಪ್ಪ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಹಲುಗಿನಕೊಪ್ಪ ಗ್ರಾಮದ ನಿವಾಸಿಗಳಾ ಜ್ಯೋತಿ (30), ಗಂಗಮ್ಮ (50) ಸೌಜನ್ಯ (4) ಎಂದು ಗುರುತಿಸಲಾಗಿದೆ. ಭಾನುವಾರ ತಡ ರಾತ್ರಿ ಘಟನೆ ಸಂಭವಿಸಿದೆ. 

ಮಲ್ಲಿಕಾರ್ಜುನ, ಮಗಳು ಸೌಜನ್ಯ, ಪತ್ನಿ ಜ್ಯೋತಿ ಹಾಗು ತಾಯಿ ಗಂಗಮ್ಮ ನಾಲ್ಕು ಮಂದಿ ಒಂದೇ ಬೈಕ್ ನಲ್ಲಿ ತೆರಳುತ್ತಿದ್ದರು. ಕಾರು ಹೀರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತಿತ್ತು. ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಟ್ಟ ಸರ್ಕಾರಗಳನ್ನ ಕಿತ್ತೊಗೆಯಿರಿ : ಮಲ್ಲಿಕಾರ್ಜುನ ಖರ್ಗೆ