Select Your Language

Notifications

webdunia
webdunia
webdunia
webdunia

ಮಾಜಿ ಸ್ಪೀಕರ್ ಗೆ ಟಾಂಗ್- ಪಟಾಕಿ ಸಿಡಿಸಿದ ಅನರ್ಹ ಶಾಸಕರ ಬೆಂಬಲಿಗರು

ಮಾಜಿ ಸ್ಪೀಕರ್ ಗೆ ಟಾಂಗ್- ಪಟಾಕಿ ಸಿಡಿಸಿದ ಅನರ್ಹ ಶಾಸಕರ ಬೆಂಬಲಿಗರು
ಮಂಡ್ಯ , ಶುಕ್ರವಾರ, 27 ಸೆಪ್ಟಂಬರ್ 2019 (16:10 IST)
ಅನರ್ಹಗೊಂಡಿರೋ ಶಾಸಕರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿರೋ ಘಟನೆ ನಡೆದಿದೆ.  

ಸರ್ವೋಚ್ಚ ನ್ಯಾಯಾಲಯವು ಉಪ ಚುನಾವಣೆಗೆ ತಡೆ ನೀಡಿರುವುದು ಸಂತೋಷ ತಂದಿದೆ. ನಾನು ಮಂಡ್ಯದ ಕೃಷ್ಣರಾಜಪೇಟೆಯ ಜನತೆಯ ಶಾಸಕ ಮಾತ್ರವಲ್ಲ ಸೇವಕ.

ನಮ್ಮನ್ನು ಅನರ್ಹರು ಎಂದು ಘೋಷಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶುಭ ಹಾರೈಸುತ್ತೇನೆ. ನಾನಿಗಲೂ ಶಾಸಕ. ನನ್ನದೇನಿದ್ದರೂ ಅಭಿವೃದ್ಧಿಯ ಮೂಲಮಂತ್ರ, ಕೆ.ಆರ್.ಪೇಟೆ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗೆ ದುಡಿಯುತ್ತೇನೆ. ಹೀಗಂತ ಶಾಸಕ ನಾರಾಯಣಗೌಡ ಹೇಳಿದ್ದಾರೆ.  

ರಾಜ್ಯದ ಎಲ್ಲಾ 15 ಶಾಸಕರಿಗೆ ಶುಭ ಸೂಚನೆ ದೊರೆತಿರುವ ಸಂದರ್ಭದಲ್ಲಿ ನಮ್ಮ ವಿರೋಧಿಗಳಿಗೂ 
ನಾನು ಶುಭವನ್ನೇ ಬಯಸುತ್ತೇನೆ ಎಂದು ನಗುನಗುತ್ತಾ ಹೇಳಿದ ಶಾಸಕ ನಾರಾಯಣಗೌಡ, ವಿಜಯದ ಸಂಕೇತವನ್ನು ಪ್ರದರ್ಶಿಸಿದರು.

ನಾರಾಯಣಗೌಡರ ಅಭಿಮಾನಿ ಬಳಗದ ಅಧ್ಯಕ್ಷ ಚಂದ್ರಮೋಹನ್ ಸಿಹಿ ವಿತರಿಸಿ ಸಂಭ್ರಮಿಸಿದರು.
‌ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆಚರಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರ ಬೆತ್ತಲೆ ಪಾರ್ಟಿಗೆ ಓಪನ್ ಆಫರ್?