Publish Date: Fri, 27 Sep 2019 (13:28 IST)
Updated Date: Fri, 27 Sep 2019 (13:31 IST)
ಸ್ಪೀಕರ್ ಆದೇಶದಿಂದಾಗಿ ಅನರ್ಹಗೊಂಡಿರೋ ಶಾಸಕರು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ ನೀಡಿದ್ದು, ಕಳೆದ ಅಧಿವೇಶನದಲ್ಲಿ ನಾನು ಸಂಪೂರ್ಣ ಹಾಜರಿದ್ದೆ.
ಅನಾರೋಗ್ಯ ಕಾರಣದಿಂದಾಗಿ ಮುಂಬಯಿ ಆಸ್ಪತ್ರೆಗೆ ದಾಖಲಾಗಿದ್ದೆ. ಸ್ಪೀಕರ್ ಗೆ ನಾನು ಎಲ್ಲ ದಾಖಲೆ ಕಳಿಸಿ ಗೈರು ಹಾಜರಿಗೆ ಅನುಮತಿ ಕೋರಿದ್ದೆ. ಆದರೆ ನನ್ನನ್ನು ಅನರ್ಹ ಮಾಡಿದ್ದರು ಎಂದರು.
ಸದ್ಯ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೇಳಿ ಸಿದ್ಧತೆ ಮಾಡಿಕೊಂಡಿದ್ದೇವು.
ಆದರೆ ಸುಪ್ರೀಂ ಕೋರ್ಟ್ ಸಂಪೂರ್ಣ ಚುನಾವಣೆಗೆ ತಡೆ ನೀಡಿದೆ. ಮುಂಬರುವ ದಿನಗಳಲ್ಲಿ ನನಗೆ ನ್ಯಾಯ ಸಿಗುವ ನಿರೀಕ್ಷೆ ಇದೆ ಅಂತ ಶ್ರೀಮಂತ ಪಾಟೀಲ ಹೇಳಿಕೊಂಡಿದ್ದಾರೆ.