Publish Date: Tue, 17 Sep 2019 (18:34 IST)
Updated Date: Tue, 17 Sep 2019 (18:36 IST)
ಕಾಂಗ್ರೆಸ್ ನಿಂದ ಅನರ್ಹಗೊಂಡಿರೋ ಶಾಸಕರನ್ನು ಭಿಕ್ಷುಕರಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ ಕೆಪಿಸಿಸಿ ಅಧ್ಯಕ್ಷರು.
ಕಾಂಗ್ರೆಸ್ ನಲ್ಲಿದ್ದಾಗ ರಾಜರ ಥರ ಇದ್ದೋರು ಈಗ ಬಿಜೆಪಿಯಲ್ಲಿ ಆ ಪಕ್ಷದ ಮುಖಂಡರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಟೀಕೆ ಮಾಡಿದ್ದಾರೆ.
ಕೇಸರಿ ಪಕ್ಷದವರನ್ನ ನಂಬಿ ಹೋಗಬೇಡಿ ಅಂತ ಹೇಳಿದ್ದೆವು. ಕಾಂಗ್ರೆಸ್ ನಲ್ಲಿ ಯಾವ ತೊಂದರೆ ಇಲ್ಲದೇ ಇದ್ದರೂ ಈಗ ಬಿಜೆಪಿಗೆ ಹೋಗಿ ಭಿಕ್ಷೆ ಬೇಡುವಂತಾಗಿದ್ದಾರೆ ಅಂತ ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.
ಶಾಸಕರನ್ನು ಅನರ್ಹರನ್ನಾಗಿಸಿ ರಮೇಶ್ ಕುಮಾರ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದ್ರು.