Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ
ಬೆಂಗಳೂರು , ಸೋಮವಾರ, 29 ಮಾರ್ಚ್ 2021 (12:22 IST)
ಬೆಂಗಳೂರು : ಮುಖ್ಯಮಂತ್ರಿ ಅವರೇ, ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ? ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಯುವತಿ ನನಗೆ ಪ್ರಾಣಭಯಿದೆ ಎಂದು ಸಿಜೆಗೆ ಪತ್ರ ಬರೆದಿದ್ದಾಳೆ. ಆಕೆಯ ಪತ್ರ  ಗಾಬರಿ ಹುಟ್ಟಿಸುವಂತಿದೆ. ಮುಖ್ಯಮಂತ್ರಿ ಅವರೇ, ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ? ಯುವತಿಯ ಪ್ರಾಣಕ್ಕೆ ಅಪಾಯ ಎದುರಾದರೆ  ಸಿಎಂ ಬಿಎಸ್ ವೈ, ಗೃಹ ಸಚಿವ ಹಾಗೂ ಇಡೀ ಸರ್ಕಾರವೇ ಹೊಣೆ  ಎಂದು ಟ್ವೀಟರ್ ನಲ್ಲಿ  ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಸಿಜೆಗೆ ಯುವತಿ ಬರೆದ ಪತ್ರದಲ್ಲಿ ಎಸ್ ಐಟಿ ಮೇಲೆಯೇ ಅಪನಂಬಿಕೆ. ಸಾಕ್ಷ್ಯನಾಶ ಮಾಡುತ್ತಿದ್ದಾರೆ. ನನ್ನ ವಿರೋಧಿಗಳ ಜತೆ ಶಾಮೀಲಾಗಿದ್ದಾರೆ. ಹೀಗೆ ಯುವತಿ ಆರೋಪಿಸಿರುವುದು ಗಂಭೀರ ವಿಷಯ. ಸಂತ್ರಸ್ತೆ ವಿಚಾರಣೆ ಸಾಧ್ಯವಾಗದ  ಪೊಲೀಸರ ವೈಫಲ್ಯಕ್ಕೆ ಯಾರು ಹೊಣೆ? ಅವರ ಮೇಲೆ ಪ್ರಭಾವ ಬೀರುತ್ತಿರುವವರು ಯಾರು?  ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದಕ್ಕೆ ಬೇರೆ ಸಾಕ್ಷಿ ಬೇಕೆ? ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನೆಲ್ಲಿಂದ ಈ ಯುವತಿಗೆ ರಕ್ಷಣೆ ಕೊಡಲಿ? ಸಿದ್ದರಾಮಯ್ಯ