Select Your Language

Notifications

webdunia
webdunia
webdunia
webdunia

ಅರಣ್ಯ ಅಧಿಕಾರಿಗಳ ಮೇಲೆ ಹುಲಿ ಉಗುರು ಆರೋಪ

ಅರಣ್ಯ ಅಧಿಕಾರಿಗಳ ಮೇಲೆ ಹುಲಿ ಉಗುರು ಆರೋಪ
bangalore , ಶುಕ್ರವಾರ, 27 ಅಕ್ಟೋಬರ್ 2023 (12:43 IST)
ಕಾನೂನು ಪಾಲಿಸಬೇಕಾದ ಅರಣ್ಯಾಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ ಮಾಡಿರೋ ಆರೋಪ ಕೇಳಿ ಬಂದಿದೆ. ರೇಂಜ್ ಫಾರೆಸ್ಟ್ ಆಫೀಸರ್ ಆಗಿರುವ ಮುನಿರಾಜ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮುನಿರಾಜು ನಡೆ ಬೇಲಿಯೇ ಎದ್ದು ಹೊಲ ಮೇದಂತೆ ಎನ್ನುವಂತಾಗಿದೆ. ಮುನಿರಾಜು ವಿರುದ್ಧ ಸದ್ಯ ಸಾರ್ವಜನಿಕರು ದೂರು ನೀಡಿದ್ದಾರೆ. ಅರಣ್ಯ ಅಧಿಕಾರಿಯಾಗಿ ಹುಲಿ ಉಗುರು ಮಾದರಿ ಇರೋ ಲಾಕೇಟ್ ಹಾಕಿರುವ RFO ಮುನಿರಾಜ್ ವಿರುದ್ಧ ದೂರು ದಾಖಲಾಗಿದೆ.
 
ವಲಯ ಅರಣ್ಯಾಧಿಕಾರಿ (RFO) ಮುನಿರಾಜ್ ಕೂಡ ಹುಲಿ ಉಗುರು ಧರಿಸಿರುವ ಕುರಿತು ದೂರು ದಾಖಲಾಗಿದೆ. ಮುನಿರಾಜ್ ಹುಲಿ ಉಗುರು ಮಾದರಿ ಇರೋ ಚೈನ್ ಹಾಕಿರೋ ಫೋಟೋ ವೈರಲ್ ಆಗಿದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಬಾಬು ಎಂಬುವರು ದೂರು ನೀಡಿದ್ದಾರೆ. ಇಮೇಲ್ ಮುಖಾಂತರ ಬಾಬಯ ದೂರು ನೀಡಿಲಾಗಿದೆ ಮೊನ್ನೆ ರಾತ್ರಿ ಯಲಹಂಕದ ರಸ್ತೆಯಲ್ಲಿ ಕಂಠಪೂರ್ತಿ ಕುಡಿದು ಆ್ಯಡಂ ಬಿದ್ದಪ್ಪ ಲ್ಯಾಷ್ ಡ್ರೈವ್ ಮಾಡಿದ್ದಾನೆ. ಈ ವೇಳೆ ಹಿಂದೆಯಿಂದ ರಾಹುಲ್ ಎಂಬಾತ ಹಾರನ್ ಮಾಡಿದ್ದಾರೆ. ಅಷ್ಟಕ್ಕೆ ಕಾರ್ ಓವರ್ ಟೇಕ್ ಮಾಡಿ ಕಾ‌ನ ಬ್ಲಾಕ್ ಮಾಡಿ ಆ್ಯಡಂ ಗಲಾಟೆ ಮಾಡಿದ್ದಾನೆ. ಕೂಡಲೇ ರಾಹುಲ್ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ 112ಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರ ಜೊತೆ ಸಹ ಅಡಂ ಬಿದ್ದಪ್ಪ ಕೂಗಾಟ ಮಾಡಿ ಪುಂಡಾಟ ತೋರಿದ್ದಾನೆ.
 
ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರು ಆ್ಯಡಂ ಪರಿಶೀಲಿಸಿದಾಗ ಕಂಠ ಕುಡಿದಿರುವುದು ಪತ್ತೆಯಾಗಿದೆ. ಈ ವೇಳೆ ಆತನ ಕಾರ್ ಸೀಜ್ ಮಾಡಿದ್ದಾರೆ. ಬಳಿಕ ಆಡಂ ಬಿದ್ದಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ರಾಹುಲ್ ದೂರಿನ ಹಿನ್ನಲೆ ಯಲಹಂಕ ನ್ಯೂಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಬಳಿಕ ಆ್ಯಡಂ ವಶಕ್ಕೆ ಪಡೆದು ಮೆಡಿಕಲ್ ಮಾಡಿಸಿದಾಗ ಸಹ ಮದ್ಯ ಸೇವಿಸಿರುವುದು ಕನ್ನರ್ಮ್ ಆಗಿದೆ. ಸದ್ಯ ಸ್ಟೇಷನ್ ಬೇಲ್ ಮೇಲೆ ಆ್ಯಡಂ ನ ಪೊಲೀಸು ಬಿಟ್ಟು ಕಳುಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಲಿ ಉಗುರು ನಕಲಿಯಾ, ಅಸಲಿಯಾ ಎಂದು ತಿಳಿಯಲು ಇನ್ನು ಎಷ್ಟು ದಿನ ಬೇಕು?