Publish Date: Thu, 26 Oct 2023 (11:00 IST)
Updated Date: Thu, 26 Oct 2023 (12:44 IST)
ಇವತ್ತು ಬೆಳಗ್ಗಿನಿಂದ ಚಿತ್ರನಟರು, ಜ್ಯೋತಿಷಿಗಳು ಇಟ್ಟಿರುವ ಹುಲಿ ಉಗುರುಗಳ ಬಗ್ಗೆ ಚರ್ಚೆ ನಡೀತಿದೆ .ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಬಂದಿದೆ.
ಮದುವೆ ಸಂದರ್ಭದಲ್ಲಿ ಕೊರಳಿಗೆ ಪೆಂಡೆಂಟ್ ಹಾಕಿದ್ದ.ನಿಖಿಲ್ ಹೆಸರು ಪ್ರಕಟ ಮಾಡಿದ ಬಳಕ ಅಧಿಕಾರಿಗಳಿಗೆ ನಾನೇ ಕಾಲ್ ಮಾಡಿ ನಿಮಗೆ ಮುಜುಗರ ಆಗಬಾರದು ಈ ರಾಜ್ಯಗಳ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಆಗಬಾರದ್ದು,ಇದರಲ್ಲಿ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ಯಾವುದೇ ತೊಂದರೆ ಇಲ್ಲ ,ಬಂದು ಪರಿಶೀಲನೆ ನಡೆಸುವಂತೆ ಹೇಳಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.