Select Your Language

Notifications

webdunia
webdunia
webdunia
webdunia

ಆ ಕಾರಣಕ್ಕೆ ನಾದಿನಿಯ ಮುಖಕ್ಕೆ ಆ್ಯಸಿಡ್ ಎರಚಿದ ಭಾವ

ಆ ಕಾರಣಕ್ಕೆ ನಾದಿನಿಯ ಮುಖಕ್ಕೆ ಆ್ಯಸಿಡ್ ಎರಚಿದ ಭಾವ
ಮಂಗಳೂರು , ಶುಕ್ರವಾರ, 24 ಜನವರಿ 2020 (21:09 IST)
ನಾದಿನಿ ಮುಖಕ್ಕೆ ಭಾವನೇ ಆ್ಯಸಿಡ್ ಎರಚಿರೋ ಅಮಾನವೀಯ ಘಟನೆ ನಡೆದಿದೆ.

ಮಂಗಳೂರಿನ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೋಲೀಸರು ವಶಕ್ಕೆ 
ಪಡೆದಿದ್ದಾರೆ.

ಆ್ಯಸಿಡ್ ಎರಚಿದ ಆರೋಪಿಯನ್ನು ಕೊಂಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂದು ಗುರುತಿಸಲಾಗಿದೆ. ಇವರ ವೃತ್ತಿಯಲ್ಲಿ ಎಲ್‍ಐಸಿ ಏಜೆಂಟ್ ಆಗಿದ್ದು ಕೃಷಿಕರಾಗಿದ್ದಾನೆ. ಈತ ತನ್ನ ತಮ್ಮನ ಪತ್ನಿ ವಿಧವೆ ಮಹಿಳೆ ಸ್ವಪ್ನಾ(35) ಎಂಬುವರ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಎಸೆದಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆಯ ಹತ್ತಿರವಿದ್ದ ತನ್ನ ಹೆಣ್ಣು ಮಗಳಿಗೂ ಆ್ಯಸಿಡ್ ತಾಗಿದ್ದು, ತಾಯಿ ಹಾಗೂ ಮಗು ಇಬ್ಬರನ್ನೂ ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ವಪ್ನಾ ಅವರ ಪತಿ ರವಿ ಅವರು ಈಗಾಗಲೇ ಮೃತಪಟ್ಟಿದ್ದು , ಪ್ರತ್ಯೇಕವಾಗಿ ತನ್ನ ಮೂರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಜಯಾನಂದ ಹಾಗೂ ಸ್ವಪ್ನಾ ಅವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿದೆ. ಅದು ಭೂವಿವಾದಕ್ಕೆ ತಿರುಗಿ ಇವರ ಮಧ್ಯೆ ಜಗಳ ನಡೆಯುತ್ತಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಪ್ರಕರಣ ಜೀವಂತವಾಗಿತ್ತು. ಮತ್ತೆ ವಿವಾದ ಭುಗಿಲೆದ್ದು ಸಂಜೆ ಆ್ಯಸಿಡ್ ಎರಚಿದ ಪ್ರಕರಣ ನಡೆದಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರು ಈ ವಿಷಯ ಮಾತಾಡ್ಲೇಬೇಡಿ ಅಂತಂದ ಕೆಪಿಸಿಸಿ ಅಧ್ಯಕ್ಷ