Select Your Language

Notifications

webdunia
webdunia
webdunia
webdunia

ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನೆರೆ ಸಂತ್ರಸ್ತರು

ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ  ನೆರೆ ಸಂತ್ರಸ್ತರು
ಬೆಳಗಾವಿ , ಭಾನುವಾರ, 6 ಅಕ್ಟೋಬರ್ 2019 (10:53 IST)
ಬೆಳಗಾವಿ : ರಾಜ್ಯದಲ್ಲಿ ಮಳೆ ಮಹಾರಾಷ್ಟ್ರದಿಂದ ನೀರು ಹರಿಸಿದ ಹಿನ್ನಲೆ ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾದರೂ ಈವರೆಗೆ ಉತ್ತರ ಕರ್ನಾಟಕದತ್ತ ತಲೆ ಹಾಕದ ಕಂದಾಯ ಸಚಿವ ಆರ್.ಅಶೋಕ್ ವಿರುದ್ದ ನೆರೆ ಸಂತ್ರಸ್ತರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಅಧಿಕಾರ ಸ್ವೀಕರಿಸಿ ಒಂದೂವರೆ ತಿಂಗಳಾದ್ರೂ ಭೇಟಿ ನೀಡಿಲ್ಲ.  ಸಿಎಂ ಯಡಿಯೂರಪ್ಪರಿಂದ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಆದರೆ ಆರ್.ಅಶೋಕ್ ಈವರೆಗೂ ಭೇಟಿ ನೀಡಿಲ್ಲ. ಅಲ್ಲದೇ  ಸಿಎಂ ಸಭೆಗೂ ಗೈರಾಗಿದ್ದರು ಎಂದು ಸಚಿವ ಆರ್.ಅಶೋಕ್ ವಿರುದ್ದ ನೆರೆ ಸಂತ್ರಸ್ತರು ಕಿಡಿಕಾರಿದ್ದಾರೆ.


ಅಲ್ಲದೇ  ನೆರೆಯಿಂದ ಮನೆ, ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದರು, ಈ ಬಗ್ಗೆ  ಪರಿಶೀಲಿನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದ್ದ ಸಚಿವ ಆರ್.ಅಶೋಕ್, ಕಂದಾಯ ಸಚಿವರಾಗಿ ಜವಬ್ದಾರಿ ವಹಿಸಿಕೊಳ್ಳಬೇಕಿತ್ತು. ಆದರೆ ಈವರೆಗೆ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ  ಎಂದು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಸಚಿವ ಆರ್.ಅಶೋಕ್ ವಿರುದ್ದ ನೆರೆ ಸಂತ್ರಸ್ತರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷ ನಾಯಕನ ಪಟ್ಟಕ್ಕೇರಲು ಕಾಂಗ್ರೆಸ್ ನಲ್ಲಿ ಎರಡು ಬಣಗಳ ನಡುವೆ ಭಾರೀ ಪೈಪೋಟಿ