Select Your Language

Notifications

webdunia
webdunia
webdunia
webdunia

ನೆರೆ ಪರಿಹಾರ : ಕೇಂದ್ರ ಸರಕಾರ ಇಷ್ಟು ಹಣ ಕೊಡಲೇಬೇಕು ಅಂದ ಕಾಂಗ್ರೆಸ್

ನೆರೆ ಪರಿಹಾರ : ಕೇಂದ್ರ ಸರಕಾರ ಇಷ್ಟು ಹಣ ಕೊಡಲೇಬೇಕು ಅಂದ ಕಾಂಗ್ರೆಸ್
ಹುಬ್ಬಳ್ಳಿ , ಶನಿವಾರ, 5 ಅಕ್ಟೋಬರ್ 2019 (14:23 IST)
ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಆದರೆ ಕೇಂದ್ರ ಕನಿಷ್ಠ ಪಕ್ಷ ರಾಜ್ಯಕ್ಕೆ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು.

ಹೀಗಂತ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಗ್ರಹ ಮಾಡಿದ್ದಾರೆ.

ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಯಷ್ಟು ಆಸ್ತಿ - ಪಾಸ್ತಿ ಹಾಳಾಗಿದ್ದು, ನೆರೆಗೆ ರಾಜ್ಯದ ಜನ ಸಿಲುಕಿ ಎರಡುವರೆ ತಿಂಗಳಾಗಿದೆ. ಆದರೆ ರಾಜ್ಯ ಸರ್ಕಾರ ನೀಡಿದ ಪರಿಹಾರ ಸಂತ್ರಸ್ಥರಿಗೆ ತಲುಪಿಲ್ಲ. ಜನ ಬೀದಿಪಾಲಾಗುತ್ತಿದ್ದಾರೆ.

ಆದರೆ ಇದೀಗ ಕೇಂದ್ರ ಸರ್ಕಾರ 1200 ಕೋಟಿ ಬಿಡುಗಡೆ ಮಾಡಿದೆ. ಕನಿಷ್ಠ 5 ಸಾವಿರ ಕೋಟಿ ರೂ. ಹಣವನ್ನಾದರೂ ಬಿಡುಗಡೆ ಮಾಡಬೇಕು.

ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಇಷ್ಟೊಂದು ನೆರೆ ಬರದಿದ್ದರೂ 16 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಜನ ಇಷ್ಟೊಂದು ಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಕ್ರೀಯಾಶೀಲವಾಗಬೇಕಿತ್ತು ಎಂದು ಲೇವಡಿ ಮಾಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಹೊಳೆನರಸೀಪುರದ ಸರ್ಕಾರಿ ಐಬಿಯಲ್ಲಿ ತಹಶೀಲ್ದಾರ್ ಗಳಿಂದ ಗುಂಡು ತುಂಡು ಪಾರ್ಟಿ