Select Your Language

Notifications

webdunia
webdunia
webdunia
webdunia

ಕೇಂದ್ರದ ರೂ. 1200 ಕೋಟಿ ನೆರೆ ಪರಿಹಾರದ ಕುರಿತು ಸದಾನಂದಗೌಡರು ಹೇಳಿದ್ದೇನು?

ಕೇಂದ್ರದ ರೂ. 1200 ಕೋಟಿ ನೆರೆ ಪರಿಹಾರದ ಕುರಿತು ಸದಾನಂದಗೌಡರು ಹೇಳಿದ್ದೇನು?
ಕೊಪ್ಪಳ , ಶನಿವಾರ, 5 ಅಕ್ಟೋಬರ್ 2019 (10:28 IST)
ಕೊಪ್ಪಳ : ಕೇಂದ್ರದಿಂದ ರೂ 1200 ಕೋಟಿ ಪ್ರವಾಹ ಪರಿಹಾರ ವಿಚಾರ ರೂ.1200 ಕೋಟಿ ದೊಡ್ಡ ಮೊತ್ತ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.




ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣವನ್ನು ಒಮ್ಮೆಲೆ ಶೇಖರಿಸಿಕೊಂಡು ಏನೂ ಮಾಡೋಕೆ ಆಗಲ್ಲ. ಹಂತ ಹಂತವಾಗಿ ಹಣ ಕೊಡಬೇಕಿದೆ. ಇದು ಮಧ್ಯಂತರ ಪರಿಹಾರ ಇನ್ನಷ್ಟು ಹಣ ಬಿಡುಗಡೆಯಾಗೋ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.



ಅಲ್ಲದೇ ದೇಶದ 9 ರಾಜ್ಯಗಳಲ್ಲಿ ನೆರೆ ಬಂದಿದೆ. ಮೊದಲು ಕರ್ನಾಟಕಕ್ಕೆ ಪರಿಹಾರ ಬಿಡುಗಡೆಯಾಗಿದೆ. ಅತ್ಯಂತ ಜಾಗರೂಕತೆಯಿಂದ ಪರಿಹಾರ ಬಿಡುಗಡೆ ಮಾಡಿದ್ದಾರೆ. ಹಿಂದೆ ಪರಿಹಾರ ಘೋಷಣೆಯಾದ ಹಣ ನುಂಗಿದ್ದನ್ನು ಕಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದಿಂದ ರಾಜ್ಯ ನೆರೆ ಪರಿಹಾರಕ್ಕೆ 1,200 ಕೋಟಿ ರೂ. ಬಿಡುಗಡೆ