Webdunia - Bharat's app for daily news and videos

Install App

ಬೆಂಕಿ ಹತ್ತಿರೋ ಅರಣ್ಯದಲ್ಲಿ ಮೋಜು ಮಸ್ತಿ!

Webdunia
ಬುಧವಾರ, 27 ಫೆಬ್ರವರಿ 2019 (17:54 IST)
ಒಂದೆಡೆ ಬೆಂಕಿ ಅವಘಡಕ್ಕೆ ನಾಡಿನ ಜನರು ಮರಗುತ್ತಿದ್ದರೆ, ಮತ್ತೊಂದೆಡೆ ಅದೇ ಪ್ರದೇಶದಲ್ಲಿ ಮೋಜು ಮಸ್ತಿ ಬಲು ಜೋರಾಗಿದೆ.

ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ವ್ಯಾನ್ ಮೇಲೆ‌ ಕುಳಿತ ಪ್ರವಾಸಿಗರು ಮೋಜು ಮಸ್ತಿ ನಡೆದಿರುವುದು ಬೆಳಕಿಗೆ ಬಂದಿದೆ.

ಸಫಾರಿ ವಾಹನಕ್ಕೆ ಓವರ್ ಲೋಡ್ ಆರೋಪ ಕೇಳಿಬಂದಿದೆ. ಹುಲಿ ಕಂಡಾಕ್ಷಣ ಸಫಾರಿ ವಾಹನದ ಮೇಲೆ ಕುಳಿತು ಪೋಟೊ ಕ್ಲಿಕ್ಕಿಸುತ್ತಿದ್ದಾರೆ ಪ್ರವಾಸಿಗರು.

ದಮ್ಮನಕಟ್ಟೆ ಹಾಗೂ ಜೆ ಎಲ್ ಆರ್ ಸಫಾರಿ ವಾಹನಗಳಲ್ಲಿ ಮೋಜು ಮಸ್ತಿ ನಡೆದಿದೆ.

ಬೆಂಕಿ ನಂದಿಸಲು ಹರಸಾಹಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಂದೆಡೆ ಪಡುತ್ತಿದ್ದರೆ, ಇತ್ತ ಅಂತರಸಂತೆ ವಲಯದಲ್ಲಿ ಹೇಳೋರಿಲ್ಲ ಕೇಳೋರಿಲ್ಲದ ಪರಿಸ್ಥಿತಿ ಎಂಬಂತಾಗಿದೆ. ಈ ವೇಳೆಯನ್ನ  ದುರ್ಬಳಕೆ  ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ.

ಆರ್ ಎಫ್ ಒ ವಿನಯ್ ಹಣದಾಸೆಗೆ ದುರ್ಬಳಕೆ ಮಾಡಿಕೊಳ್ಳುತ್ತೊದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ದಮ್ಮನಕಟ್ಟೆ ಸಫಾರಿ ಪಾಯಿಂಟ್ ವಾಹನದ ಮೇಲೆ ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಿದ್ದು ಯಾರು? ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments