Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಮುಗಿಸಲು ಅಪ್ಪಮಕ್ಕಳು ಸಂಚು: ಯಡಿಯೂರಪ್ಪ

ಕಾಂಗ್ರೆಸ್ ಮುಗಿಸಲು ಅಪ್ಪಮಕ್ಕಳು ಸಂಚು: ಯಡಿಯೂರಪ್ಪ
ಮೈಸೂರು , ಬುಧವಾರ, 6 ಜೂನ್ 2018 (16:54 IST)
ಹೊಂದಾಣಿಕೆ ರಾಜಕೀಯದ ಮೂಲಕ  ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಅಪ್ಪ ಮಕ್ಕಳು ಸಂಚು ರೂಪಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಮೈಸೂರಿನ ಪ್ರೆಸಿಡೆಂಟ್ ಹೊಟೇಲ್‌ನಲ್ಲಿ ಮಾಜಿ ಸಿಎಂ ಬಿಎಸ್‌ವೈ ಮಾತನಾಡಿ, ಈ ಅಪ್ಪ ಮಕ್ಕಳ ಸಂಚಿಗೆ ಕಾಂಗ್ರೆಸ್ ಬಲಿಯಾಗಲಿದೆ.ಹೆಸರು ಹೇಳದೆ ದೇವೆಗೌಡರು ಮತ್ತು ಕುಮಾರಸ್ವಾಮಿರನ್ನ ಟೀಕಿಸಿದ್ದಾರೆ.
 
ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿ ಕಾಂಗ್ರೆಸ್ ಪರ ಮೃದುಧೋರಣೆ ತೋರಿದ ಬಿಎಸ್‌ವೈ. ಕುಮಾರಸ್ವಾಮಿ ಬಜೆಟ್ ಮಂಡಿಸುವುದನ್ನ ಕಾದು ನೋಡೋಣ.ಒಂದು, ಎರಡು , ಮೂರು ತಿಂಗಳು ಕಾದು ನೋಡೋಣ. ಜಯನಗರ ಕ್ಷೇತ್ರ ಹಾಗೂ ವಿಧಾನಪರಿಷತ್‌ನಲ್ಲು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ.ಅವರೇನಾದ್ರು ಮಾಡಲಿ ನಮ್ಮ ಪ್ರಯತ್ನ ಮಾತ್ರ ನಿಲ್ಲೋದಿಲ್ಲ ಎಂದು ಗುಡುಗಿದರು.
 
ಇಂದು ಹಲವು ಕಡೆ ವಿಧಾನಪರಿಷತ್ ಚುನಾವಣಾ ಪ್ರಚಾರಕ್ಕೆ ಹೋಗಬೇಕಿತ್ತು. ಹವಾಮಾನ ವೈಪರೀತ್ಯದಿಂದ ಹೆಲಿಕ್ಯಾಪ್ಟರ್ ಪ್ರಯಾಣ ರದ್ದು ಮಾಡಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ಮಾಜಿ ಸಿಎಂ ಬಿಎಸ್‌ವೈ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನ ಗೋವಿಂದ: ಎಂ.ಬಿ.ಪಾಟೀಲ್ ಗರಂ