Select Your Language

Notifications

webdunia
webdunia
webdunia
webdunia

ಪ್ರಮಾಣ ವಚನ ಸಮಾರಂಭದ ಹಿಂದೆಯೇ ಅಸಮಾಧಾನದ ಹೊಗೆ

ಪ್ರಮಾಣ ವಚನ ಸಮಾರಂಭದ ಹಿಂದೆಯೇ ಅಸಮಾಧಾನದ ಹೊಗೆ
ಬೆಂಗಳೂರು , ಬುಧವಾರ, 6 ಜೂನ್ 2018 (13:10 IST)
ಬೆಂಗಳೂರು: ನೂತನವಾಗುತ್ತಿರುವವರಿಗೆ ಸಚಿವರಾಗುತ್ತಿರುವ ಪ್ರಮಾಣ ವಚನದ ಸಂಭ್ರಮವಾದರೆ, ಸ್ಥಾನ ವಂಚಿತರಾದವರಲ್ಲಿ ಅಸಮಾಧಾನದ ಹೊಗೆ.

ಇದು ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ಕಂಡುಬರುತ್ತಿದೆ. ಜೆಡಿಎಸ್ ನ ಹಿರಿಯ ಶಾಸಕ ಬಸವರಾಜ್ ಹೊರಟ್ಟಿ ತಮ್ಮ ಅಸಮಾಧಾನವನ್ನು ಮಾಧ್ಯಮಗಳ ಮೂಲಕವೇ ಹೊರಹಾಕಿದ್ದಾರೆ.

ನಾನು ಹಿರಿಯ ಶಾಸಕ. ನನ್ನ ಹಿರಿತನ ಗಮನಿಸಿ ಪಕ್ಷವೇ ಸ್ಥಾನ ನೀಡುತ್ತೆ ಅಂದುಕೊಂಡಿದ್ದೆ. ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಶಿಕ್ಷಕರೂ ಕಾದಿದ್ದರು. ಆದರೆ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಳ್ಳಲ್ಲ ಎಂದು ಶಿಕ್ಷಣ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಸವರಾಜ ಹೊರಟ್ಟಿ ಹೇಳಿಕೊಂಡಿದ್ದಾರೆ.

ಇತ್ತ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ಕೂಡಾ ಸಚಿವ ಸ್ಥಾನ ಸಿಗದ ನಿರಾಶೆಯಲ್ಲಿದ್ದಾರೆ. ಸಿದ್ದರಾಮಯ್ಯ ನಮ್ಮ ನಾಯಕರು. ಅವರ ಬಳಿಯೇ ಈ ವಿಚಾರ ಚರ್ಚಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಂತೂ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ನಲ್ಲಿ ಅಸಮಾಧಾನವೂ ಎದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರಿಗೆ ಶಾಕ್!