Select Your Language

Notifications

webdunia
webdunia
webdunia
webdunia

ಬ್ಯಾಂಕಿಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಬೆವರಿಳಿಸಿದ ರೈತರು!

ಬ್ಯಾಂಕಿಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಬೆವರಿಳಿಸಿದ ರೈತರು!
ಹಾವೇರಿ , ಸೋಮವಾರ, 17 ಡಿಸೆಂಬರ್ 2018 (18:59 IST)
ಬ್ಯಾಂಕಿನ ಸಾಲವನ್ನು ಪಾವತಿ ಮಾಡಲು ಹೋದಾಗ ಬ್ಯಾಂಕ್ ನಿಂದಾಗಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಬ್ಯಾಂಕಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ರೈತರು ಬ್ಯಾಂಕ್ ಗೆ  ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರ ಗ್ರಾಮದ ಸುತಗಟ್ಟಿ ಗ್ರಾಮದ ರೈತ ಮಲ್ಲೇಶಪ್ಪ ಬಡಕಾರ ಎಂಬ ರೈತ ಎರಡು ವರ್ಷಗಳ ಹಿಂದೆ ಎಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಸುಮಾರು 5 ಲಕ್ಷ 21 ಸಾವಿರ ರೂಪಾಯಿಗಳಷ್ಟು ಸಾಲ ಪಡೆದಿದ್ದ. ಆತ ಈಗಾಗಲೇ 4 ಲಕ್ಷದ 3 ಸಾವಿರ ರೂಪಾಯಿಗಳನ್ನು ಮರು ಪಾವತಿಸಿದ್ದಾನೆ.  

ಉಳಿದ ಹಣ‌ 3 ಲಕ್ಷದ 89 ಸಾವಿರವನ್ನು ಡಿಮ್ಯಾಂಡ್ ಡ್ರಾಪ್ಟ್ ಮುಖಾಂತರ ಬ್ಯಾಂಕ್ ಗೆ ಕಳುಹಿಸಿದ್ದಾನೆ. ಆದರೂ ಕೂಡ ನಮಗೆ ಬ್ಯಾಂಕ್ ನವರಿಂದ ತೊಂದರೆಯಾಗುತ್ತಿದೆ ಎಂದು ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಿ ಬ್ಯಾಂಕ್ ನ ಮೇಲಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.




Share this Story:

Follow Webdunia kannada

ಮುಂದಿನ ಸುದ್ದಿ

ಬಿರು ಬಿಸಿಲನ್ನೂ ಲೆಕ್ಕಿಸದೇ ರೈತರು ಉರುಳು ಸೇವೆ ಮಾಡಿದ್ದೇಕೆ?