Publish Date: Mon, 17 Dec 2018 (14:41 IST)
Updated Date: Mon, 17 Dec 2018 (14:46 IST)
ಉದ್ದೇಶಿತ ಹೊಸ ಟ್ರಾಯ್ ನೀತಿ ಜಾರಿಗೆ ತರುತ್ತಿರುವುದನ್ನು ಖಂಡಿಸಿ ಕೇಬಲ್ ಆಪರೇಟರ್ ಗಳು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕೇಬಲ್ ಆಪರೇಟರ್ ಗಳು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರಕಾರದ ಉದ್ದೇಶಿತ ಹೊಸ ಟ್ರಾಯ್ ನೀತಿಯನ್ನು ವಿರೋಧಿಸಿ ರಸ್ತೆಗಿಳಿದ ಕೇಬಲ್ ಆಪರೇಟರ್ ಗಳು ಉದ್ದೇಶಿತ ನೀತಿ ಜಾರಿ ಕೈಬಿಡುವಂತೆ ಒತ್ತಾಯಿಸಿದರು.
ಹೊಸ ಕೇಬಲ್ ಕಾಯ್ದೆ ಮುಂದಿನ ತಿಂಗಳು ಅನುಷ್ಠಾನ ಮಾಡಲು ಕೇಂದ್ರ ಸರಕಾರ ಉದ್ದೇಶಿಸಿರುವುದು ಸರಿಯಲ್ಲ. ಇದರಿಂದ ಕೇಬಲ್ ಆಪರೇಟರ್ ಗಳಿಗೆ ಬಹಳ ತೊಂದರೆಯಾಗಲಿದೆ ಎಂದರು.
ಕೇಬಲ್ ಆಪರೇಟರ್ ಗಳು ಜಿಲ್ಲಾಧಿಕಾರಿಗೆ ಮನವಿಯನ್ನು ನೀಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.