Select Your Language

Notifications

webdunia
webdunia
webdunia
webdunia

ಕಾರಂಜಾ ನದಿ ನೀರಿಗಾಗಿ ಆಗ್ರಹಿಸಿ ರೈತರಿಂದ ಹೆದ್ದಾರಿ ತಡೆ

ಕಾರಂಜಾ ನದಿ ನೀರಿಗಾಗಿ ಆಗ್ರಹಿಸಿ ರೈತರಿಂದ ಹೆದ್ದಾರಿ ತಡೆ
ಬೀದರ್ , ಸೋಮವಾರ, 17 ಡಿಸೆಂಬರ್ 2018 (18:43 IST)
ಭೀಕರ ಬರದಿಂದ ಬೆಂದು ಹೋಗುತ್ತಿರುವ ರೈತಾಪಿ ವರ್ಗ ನದಿ ನೀರು ಹರಿಸುವಂತೆ ಒತ್ತಾಯಿಸಿ ಹೆದ್ದಾರಿ ತಡೆ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ರೈತರ ಹಿಂಗಾರು ಬೆಳೆಗಳಿಗೆ ಕಾರಂಜಾ ಜಲಾಶಯದಿಂದ ನೀರು ಬಿಡುವಂತೆ ಆಗ್ರಹಿಸಿ ನೂರಾರು ರೈತರು ಬ್ರೀಡ್ಜ್ ಮೇಲೆ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ಮಾಡಿದರು.

ಬೆಳಿಗ್ಗೆಯಿಂದ ನದಿಯಾಚೆಗಿನ ಗ್ರಾಮಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಔರಾದ್, ನಾಂದೇಡ, ಭಾಗದಲ್ಲಿ ಸಂಚರಿಸುವ ಪ್ರಯಾಣಿಕರ ಪರದಾಟ ಹೆಚ್ಚಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ತಹಸೀಲ್ದಾರ ಚಂದ್ರಶೇಖರ್ ಭೇಟಿ ನೀಡಿ ಮನವೊಲಿಸಿದರೂ, ಪಟ್ಟು ಬಿಡದ ಪ್ರತಿಭಟನಾಕಾರರು ನೀರು ಬಿಡುವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎನ್ನುವ ಮೂಲಕ  ಮತ್ತಷ್ಟು ಹೋರಾಟ ತೀವ್ರಗೊಳಿಸಲು ನಿರ್ಧಾರ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಾಯುತ್ತಿದ್ದ ಮಂಗನಿಗೆ ಸಾಯಮ್ಮ ನೆರವಾಗಿದ್ದು ಹೇಗೆ ಗೊತ್ತಾ?